Advertisement

ದೇಶದ ಪ್ರಗತಿಗೆ ಅಡಿಪಾಯ ಹಾಕಿದ ವಾಜಪೇಯಿ: ಗದ್ದಿಗೌಡರ

05:43 PM Dec 26, 2023 | Team Udayavani |

ಬಾಗಲಕೋಟೆ: ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಪ್ರಗತಿ ಪ್ರಾರಂಭವಾಗಿದ್ದು, ಅಭಿವೃದ್ಧಿಗೆ ಅವರೆ ಅಡಿಪಾಯ ಹಾಕಿದ್ದು ಅಟಲ ಬಿಹಾರಿ ವಾಜಪೇಯಿ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

Advertisement

ನಗರದ ಶಿವಾನಂದ ಜೀನ್‌ ನಲ್ಲಿರುವ ಬಿಜೆಪಿ ಕಾರ್ಯಾಲಯ ಆವರಣದಲ್ಲಿ ಸೋಮವಾರ ನಗರ ಮಂಡಲದಿಂದ ಹಮ್ಮಿಕೊಂಡಿದ್ದ ಭಾರತರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಹದಿನ್ಕಾಲು ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನ, ಗ್ರಾಮಗಳಿಗೆ
ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ, ಸಾಗರ ಮಾಲಾ, ಭಾರತ ಮಾಲಾ, ನದಿ ಜೋಡನೆಯಂತಹ ಯಶಸ್ವಿ ಯೋಜನೆಗಳ ನಿರ್ಮಾತೃ, ಕಾರ್ಗಿಲ್‌ ಯುದ್ದದಲ್ಲಿ ಪಾಕಿಸ್ತಾನ ಮಣ್ಣು ಮುಕ್ಕಿಸಿದ ಮಹಾನ್‌ ಧೈರ್ಯಶಾಲಿ. ಡಾ| ಎಪಿಜೆ
ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿ ಮಹಾತಚೇತನ ಅವರಾಗಿದ್ದರು.

ಅಜಾತ ಶತ್ರು ಎಂದು ಹೆಸರಾದ ರಾಜಕಾರಣಿ. ಆಧುನಿಕ ಭಾರತದ ನಿರ್ಮಾಣಕಾರರಾಗಿ ಅವರ ಯೋಜನೆಗಳಿಂದ ಭಾರತ ಪ್ರಗತಿಯತ್ತ ಹೆಜ್ಜೆಯನ್ನಿಟ್ಟಿದ್ದು, ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದವರು ಅಟಲ್‌ ಬಿಹಾರಿ ವಾಜಪೇಯಿ ಅವರಾಗಿದ್ದಾರೆ ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು.

ಬಿಜೆಪಿ ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಮಾಜಿ ಉಪಾಧ್ಯಕ್ಷ ಬಸವರಾಜ ಅವರಾದಿ, ಬಿಟಿಡಿಎ ಮಾಜಿ ಸದಸ್ಯ ಶಿವಾನಂದ ಟವಳಿ, ನಗರಸಭೆ ಸದಸ್ಯರಾದ ವೀರಪ್ಪ ಶಿರಗನ್ನವರ, ಶೋಭಾ ರಾವ್‌, ಶಶಿಕಲಾ ಮಜ್ಜಗಿ, ಮುಖಂಡರಾದ ಡಾ|ಎಂ.ಎಸ್‌. ದಡ್ಡೆನ್ನವರ, ಗುಂಡುರಾವ ಶಿಂಧೆ, ಅನಿತಾ ಸರೋದೆ, ವಿಜಯಲಕ್ಷ್ಮೀ ಆಚಾರ್ಯ, ಪ್ರೇಮಾ ಅಂಬಿಗೇರ, ಅಂಬಾಜಿ ಜೋಶಿ ಯಲ್ಲಪ್ಪ ನಾರಾಯಣಿ, ಚೆನ್ನಯ್ಯ ಹಿರೇಮಠ, ಶ್ರೀನಾಥ ಸಜ್ಜನ, ರಮೇಶ
ಕೋಟಿ, ಶ್ರೀಧರ ನಾಗರಬೇಟ್ಟ, ಮಲ್ಲು ಕಾಂಬಳೆ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next