Advertisement

ವಾಜಪೇಯಿ ಅಖಂಡ ದೇಶಪ್ರೇಮಿ

12:28 PM Dec 26, 2021 | Team Udayavani |

ಭಾಲ್ಕಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅಖಂಡ ದೇಶಪ್ರೇಮಿ ಆಗಿದ್ದರು ಎಂದು ಬಿಜೆಪಿ ಯುವ ಮುಖಂಡ ಡಿ.ಕೆ. ಸಿದ್ರಾಮ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಅಟಲ್‌ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸುಶಾಸನ ದಿವಸ್‌ನಲ್ಲಿ ಅವರು ಮಾತನಾಡಿದರು.

ವಾಜಪೇಯಿಯವರು ದೇಶ ಮುನ್ನಡೆಸಲು ಅತ್ಯಂತ ಸುಗಮ ಮಾರ್ಗ ತಿಳಿಸಿದ್ದಾರೆ. ಅವರ ತತ್ವಗಳಂತೆ ದೇಶ ಮುನ್ನಡೆಸಿಕೊಂಡು ಹೋದರೆ ಕೆಲವೇ ದಿನಗಳಲ್ಲಿ ಭಾರತ ಜಗತ್ತಿನ ಸುಪ್ರಸಿದ್ಧ ರಾಷ್ಟ್ರಗಳಲ್ಲಿ ಒಂದಾಗುವುದು ಎಂದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಪಂಡಿತ ಶಿರೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸುರೇಶ ಹುಬ್ಳಿಕರ, ಗೋವಿಂದರಾವ್‌ ಬಿರಾದಾರ, ವಿಶ್ವನಾಥ ಮೋರೆ, ಪಿ.ಆರ್‌. ಪಾಟಿಲ, ಶಿವಾಜಿ ಮೇತ್ರೆ, ಎಲ್‌.ಎಂ. ಕಾಂಬಳೆ, ಸರದ ದುರ್ಗಳೆ, ಪಂಡರಿ ಮೇತ್ರೆ, ಸಿದ್ದು ಕಾಡಾದಿ, ಸಂಗಮೇಶ ಭೂರೆ, ಪ್ರವೀಣ ಸಾವರೆ, ತುಕಾರಾಮ ಹಜಾರೆ, ಸಂಜೀವ ಸಿಂಧೆ, ರಮೇಶ ಬಿರಾದಾರ, ಕೈಲಾಸ ಪಾಟೀಲ, ಜೈಭೀಮ, ಮಲ್ಲಪ್ಪ ದೇಶಮುಖ ಇದ್ದರು. ರಾಜಶೇಖರ ಬಿರಾದಾರ ನಾವದಗಿ ಸ್ವಾಗತಿಸಿದರು. ಸುಭಾಷ ಮಾಶೆಟ್ಟೆ ನಿರೂಪಿಸಿದರು. ಶರಣು ಎಕಲಾರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next