Advertisement

“ಬೆಂಗಳೂರು ಬಾಯ್ಸ್’ಜೊತೆ ವೈನಿಧಿ

09:28 AM Mar 11, 2020 | Lakshmi GovindaRaj |

“ಹ್ಯಾಪಿ ಬರ್ತ್‌ಡೇ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಹಿರಿಯ ರಾಜಕಾರಣಿ ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಚೆಲುವರಾಯ ಸ್ವಾಮಿ ಈಗ ಸದ್ದಿಲ್ಲದೆ ಮತ್ತೂಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಬೆಂಗಳೂರು ಬಾಯ್ಸ್’. ಪಕ್ಕಾ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರವಿರುವ ಈ ಚಿತ್ರ ನಾಲ್ವರು ಹುಡುಗರ ಸುತ್ತ ನಡೆಯಲಿದೆಯಂತೆ.

Advertisement

ಇನ್ನು ಈ ಚಿತ್ರದಲ್ಲಿ ಸಚಿನ್‌ ಅವರೊಂದಿಗೆ “ಇರುವುದೆಲ್ಲವ ಬಿಟ್ಟು’ ಚಿತ್ರದ ಶ್ರೀ ಮಹದೇವ್‌, “ಬಿಗ್‌ಬಾಸ್‌’ ಖ್ಯಾತಿಯ ಚಂದನ್‌ ಆಚಾರ್‌ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇನ್ನೊಂದು ಮುಖ್ಯ ಪಾತ್ರಕ್ಕಾಗಿ ಮತ್ತೂಬ್ಬ ನಾಯಕನ ಹುಡುಕಾಟ ನಡೆಯುತ್ತಿದೆ. ಚಿತ್ರದಲ್ಲಿ “ಯಾನ’ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾಗಿದ್ದ ವೈನಿಧಿ ಜೈಜಗದೀಶ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರತಂಡದ ಪಟ್ಟಿ ಹೊರಬರುವ ಸಾಧ್ಯತೆ ಇದೆ. ಈ ಹಿಂದೆ “ಲಂಡನ್‌ನಲ್ಲಿ ಲಂಬೋದರ’ ಚಿತ್ರವನ್ನು ನಿರ್ದೇಶಿಸಿದ್ದ ರಾಜ್‌ ಸೂರ್ಯ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, “ವಿ ಮೂವೀಸ್‌ ಮೇಕರ್’ ಬ್ಯಾನರ್‌ನಲ್ಲಿ ವಿಕ್ರಮ್‌. ಕೆ ಯಲ್ಲಯ್ಯ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟರ್‌ ಇದೇ ಶಿವರಾತ್ರಿಗೆ ಬಿಡುಗಡೆಯಾಗಿದ್ದು, ಸದ್ಯ ಚಿತ್ರದ ಅಂತಿಮ ಹಂತದ ಪ್ರೀ-ಪ್ರೊಡಕ್ಷನ್‌ ಕೆಲಸಗಳಲ್ಲಿ ಚಿತ್ರತಂಡ ಬಿಝಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next