Advertisement

ಮನೆ ಮನೆಗೆ ತೆರಳಿ ತಹಶೀಲ್ದಾರ್‌ರಿಂದ ಲಸಿಕೆ ಅರಿವು

04:11 PM Apr 22, 2021 | Team Udayavani |

ಕನಕಪುರ: ತಾಲೂಕಿನಲ್ಲಿ ಕೋವಿಡ್ ತೀವ್ರತೆಗೆಕಡಿವಾಣ ಹಾಕಲು ಸ್ವತಹ ತಹಶೀಲ್ದಾರ್‌ವಿಶ್ವನಾಥ್‌ ಮನೆ ಮನೆಗೆ ತೆರಳಿ ಲಸಿಕೆಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.

Advertisement

ತಾಲೂಕಿನಲ್ಲಿ ಕೊರೊನಾ ಎರಡನೇ ಅಲೆದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಪ್ರತಿ ದಿನತಾಲೂಕಿನಲ್ಲಿ 30ರಿಂದ 40 ಕೊರೊನಾ ಸೋಂಕಿತಪ್ರಕರಣ ದಾಖಲಾಗುತ್ತಿವೆ ಕೊರೊನಾ ತೀವ್ರತೆಅರಿತ ತಹಶೀಲ್ದಾರ್‌ ತಾಲೂಕಿನ ಹಾರೋಹಳ್ಳಿಮತ್ತು ಮರಳವಾಡಿ ಹೋಬಳಿಗಳಲ್ಲಿ ಸ್ವತಹ ಫೀಲ್ಡಿಗಿಳಿದಿದ್ದರು.

ಮರಳವಾಡಿ ಗ್ರಾಪಂ, ಕಂದಾಯ ಇಲಾಖೆ,ಸ್ಥಳಿಯ ವೈದ್ಯರು, ಆಶಾ ಅಂಗನವಾಡಿ ಕಾರ್ಯಕರ್ತೆಯರ ತಂಡ ಮರಳವಾಡಿ ಗ್ರಾಮದಲ್ಲಿಸುಡುತ್ತಿರುವ ಬೇಸಿಗೆ ಬಿಸಿಲನ್ನು ಲೆಕ್ಕಿಸದೆ ಮನೆಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ತಿಳಿವಳಿಕೆನೀಡಿದರು.ಮನೆಯಲ್ಲಿರುವ 45 ವರ್ಷ ಮೇಲ್ಪಟ್ಟಮಹಿಳೆಯರು ಪುರುಷರು ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಖಾತರಿ ಪಡಿಸಿಕೊಂಡರು. ಲಸಿಕೆಪಡೆಯದೇ ಇರುವವರಿಗೆ ಲಸಿಕೆ ಮಹತ್ವ ತಿಳಿಸಿಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿದರು.ಲಸಿಕೆ ಹಾಕಿಸಿಕೊಳ್ಳಿ: ತಮ್ಮ ವಯೋಮಿತಿತಿಳಿಯದೇ ಇದ್ದ ಮಹಿಳೆಯೊಬ್ಬರ ಆಧಾರ್‌ಪರಿಶೀಲಿಸಿ ಪಿಂಚಣಿ ಮಾಡಿಕೊಡುವಂತೆಸ್ಥಳದಲ್ಲಿದ್ದ ಆರ್‌ಐ ವಿಎ ಗಳಿಗೆ ಸೂಚನೆನೀಡಿದರು.

18 ವರ್ಷ ಮೇಲ್ಟಟ್ಟ ಎಲ್ಲರಿಗೂಆರೋಗ್ಯ ಇಲಾಖೆ ಮೇ ತಿಂಗಳಲ್ಲಿ ಲಸಿಕೆ ಹಾಕುವಅಭಿಯಾನ ಆರಂಭವಾಗಲಿದ್ದು ಪ್ರಜ್ಞಾವಂತಮತ್ತು ವಿದ್ಯಾವಂತ 18 ವರ್ಷ ಮೇಲ್ಪಟ್ಟಯುವಕರು ವಯಸ್ಕರು ಲಸಿಕೆ ಹಾಕಿಸಿಕೊಳ್ಳಬೇಕುಎಂದು ಮನವರಿಕೆ ಮಾಡಿಕೊಟ್ಟರು.

ಅರಿವು: ಬಳಿಕ ಹಾರೋಹಳ್ಳಿಗೆ ಗ್ರಾಪಂಆವರಣದಲ್ಲಿ ಲಸಿಕೆ ನೀಡುತ್ತಿದ್ದ ಕ್ಯಾಂಪ್‌ಗೆ ಭೇಟಿನೀಡಿ ಜನರಿಗೆ ತಿಳಿವಳಿಕೆ ನೀಡಿದರು. ಪಕ್ಕದಲ್ಲೇಇದ್ದ ಕೆನರಾ ಬ್ಯಾಂಕಿಗೂ ಭೇಟಿ ನೀಡದ ಅವರು,ಬ್ಯಾಂಕ್‌ ಸಿಬ್ಬಂದಿಗೆ ಸಾರ್ವಜನಿಕರಿಗೆಕಡ್ಡಾಯವಾಗಿ ಕೊರೊನಾ ಮಾರ್ಗ ಸೂಚಿಪಾಲಿಸುವಂತೆ ಮನವಿ ಮಾಡಿದರು.

Advertisement

ಬಳಿಕರಾಘವೇಂದ್ರ ವೈನ್‌ ಶಾಪ್‌ಗೆ ಭೇಟಿ ನೀಡಿ ಮಾಸ್ಕ್ಹಾಕಿಕೊಂಡು ಬರುವ ಮದ್ಯಪ್ರಿಯರಿಗೆ ಮಾತ್ರಕೊಡಬೇಕು. ವೈನ್‌ ಶಾಪ್‌ನಲ್ಲಿ ಮದ್ಯ ಸೇವಿಸಲುಯಾರಿಗೂ ಅವಕಾಶ ಕೊಡಬಾರದು ಎಂದುಖಡಕ್‌ ಆದೇಶ ಮಾಡಿದರು.

ಲಸಿಕೆ ಶಕ್ತಿ ಇದ್ದಂತೆ: ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕೊರೊನಾ ವಿರುದ್ಧಹೋರಾಡಲು ಲಸಿಕೆ ಎಂಬ ಶಕ್ತಿಯನ್ನು 45 ವರ್ಷಮೇಲ್ಪಟ್ಟ ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು.

ತಾಲೂಕಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಮುಂದಿನ ದಿನಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗಲಿದೆ.ಬೇಕು ಎಂದರೂ ಲಸಿಕೆ ಸಿಗುವುದಿಲ್ಲ. ಹೀಗಾಗಿಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು.ಲಸಿಕೆ ಪಡೆಯುವುದರಿಂದ ಶಕ್ತಿ ವೃದ್ಧಿಯಾಗಿಕೊರೊನಾದಿಂದ ದೂರವಿಬಹುದು. ಲಸಿಕೆಒಂದು ಶಕ್ತಿ ಇದ್ದಂತೆ. ಆ ಶಕ್ತಿಯನ್ನು ನೀವೆಲ್ಲರೂಪಡೆದು ಕೊರೊನಾ ಮುಕ್ತ ಸಮಾಜಕ್ಕೆ ನಮಗೆ ಶಕ್ತಿನೀಡಬೇಕು ಎಂದರು.

ಪ್ರತಿಯೊಬ್ಬರಿಗೂ ಲಸಿಕೆತಲುಪಬೇಕು ಆ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ನಾವೂ ಮನೆ ಮನೆಗೆ ಭೇಟಿ ನೀಡಿಕೊರೊನಾ ಲಸಿಕೆ ಪಡೆದುಕೊಳ್ಳುವಂತೆ ಮನವರಿಕೆಮಾಡಿಕೊಟ್ಟಿದ್ದೇವೆಂದರು.

Advertisement

Udayavani is now on Telegram. Click here to join our channel and stay updated with the latest news.

Next