Advertisement
ಹೆಬ್ಬಾಳ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಾಗ ಏನೇನು ಅನಾನುಕೂಲ ಆಯ್ತು ಎನ್ನುವುದು ಗೊತ್ತಿದೆ. ಇನ್ನೂ ಕೆಲವು ದಿನಗಳಲ್ಲಿ ಪರಿಸ್ಥಿತಿ ನೋಡುತ್ತೇವೆ. ನಾವು ಶಾಸಕರು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೊಳಗಾದವರಿಗೆ ನೆರವು ಕೊಡುತ್ತೇವೆ. ಯಾರೂ ಹಸಿವಿನಿಂದ ಇರಲು ಬಿಡುವುದಿಲ್ಲ.ಸರ್ಕಾರದಿಂದಲೂ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ. ಸಿಎಂಗೂ ಒತ್ತಾಯ ಹಾಕುತ್ತೇವೆ ಎಂದರು.
Related Articles
Advertisement
ಖಾಸಗಿ ಆಸ್ಪತ್ರೆಗಳಲ್ಲಿ ಶೋಷಣೆ, ಹಣ ವಸೂಲಿ ವಿಚಾರವಾಗಿ ಉತ್ತರಿಸಿದ ಅವರು, ಖಾಸಗಿ ಆಸ್ಪತ್ರೆಗಳ ಸುಲಿಗೆ ನಮ್ಮ ಗಮನಕ್ಕೂ ಬಂದಿದೆ. ಹೆಣವನ್ನೂ ಹಣ ಕೊಟ್ಟರೆ ಮಾತ್ರವೇ ಕೊಡುವ ಪರಿಸ್ಥಿತಿಯಿದೆ. ನಮ್ಮ ಕೈಯಲ್ಲಾಗಿದ್ದಷ್ಟೇ ನಾವು ಬಗೆಹರಿಸಬಹುದು. ನಮ್ಮ ಗಮನಕ್ಕೆ ಬರುವ ಒಂದೆರಡು ಪ್ರಕರಣಗಳನ್ನಷ್ಟೇ ನಾವು ಬಗೆಹರಿಸಬಹುದು, ಎಲ್ಲವನ್ನೂ ನಾವು ಬಗೆಹರಿಸಲು ಆಗುವುದಿಲ್ಲ. ಎಲ್ಲ ಬಗೆಹರಿಸುವ ಪರಿಸ್ಥತಿಯಲ್ಲೂ ನಾವು ಯಾರೂ ಇಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.