Advertisement

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

03:34 PM Feb 26, 2021 | Team Udayavani |

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರ ನಾಯಕತ್ವದ ಲಕ್ಷಣಗಳು ಇಲ್ಲ. ಸ್ವಾತಂತ್ರ್ಯ ಸೇನಾನಿ ಸರ್ದಾರ್ ಪಟೇಲರ ಹೆಸರಲ್ಲಿದ್ದ ಗುಜರಾತ್ ನ ಅಹಮದಾಬಾದ್ ಕ್ರಿಕೆಟ್ ಮೈದಾನವನ್ನು ಅಭಿವೃದ್ಧಿಪಡಿಸಿದ ಮಾತ್ರಕ್ಕೆ ಅದರ ಹೆಸರು ಹೆಸರು ಬದಲಾಯಿಸಿ ನರೇಂದ್ರ ಮೋದಿಯವರ ಹೆಸರು ಇಡೋದು ಸರಿಯಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದ ಅವರು ರಾಷ್ಟ್ರ ನಾಯಕರು ಎಂದೆನಿಸಿಕೊಳ್ಳಲ್ಲ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ಕೇವಲ ನೂರು ದಿನಗಳಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವುದಾಗಿ ಹೇಳಿದ್ದರು. ಆದರೆ, ಈಗ ಇಂಧನ ಬೆಲೆ 100 ರೂ.ಗಳ ಸಮೀಪದಲ್ಲಿದೆ. ರಾಜಸ್ಥಾನ ಸೇರಿ ಕೆಲ ರಾಜ್ಯಗಳಲ್ಲಿ ನೂರು ರೂ ದಾಟಿದೆ ಎಂದು ಟೀಕಿಸಿದರು.

ಇದನ್ನೂ ಓದಿ:1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

ಅಡುಗೆ ಅನಿಲ ಬೆಲೆ ಒಂದೇ ತಿಂಗಳಲ್ಲಿ 100 ರೂ. ಏರಿಕೆಯಾಗಿದೆ. ಸಾರಿಗೆ ವೆಚ್ಚ ಸೇರಿ 810 ರೂ.ಗೆ  ಬೆಲೆ ಏರೆಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next