Advertisement

Rain: ಮರೆಯದ ಮೇಘರಾಜನ ನೆನಪು

04:06 PM Jun 26, 2024 | Team Udayavani |

ಬಿಸಿಲಿನ ತಾಪಕ್ಕೆ ಗಿಡ-ಮರಗಳೆಲ್ಲ ಬಾಡಿ ಬೆಂಡಾದಾಗ ಜೀವತುಂಬಲು ಮೇಘರಾಜ ತುಂತುರಿನ ನಿನಾದದಲ್ಲಿ ಧರೆಗಿಳಿದು ಬಾಡಿಬೆಂಡಾಗಿದ್ದ ಗಿಡ-ಮರಗಳ ತನಿಸುವ ಕಾಲವೆಂದರೆ ಮಳೆಗಾಲ.ಮನಸ್ಸಿಗೆ ಮರಗಳಿಗೆ ತಂಪೆರೆವ ಕಾಲವಿದು. ಮಳೆಗಾಲ ಬಂತೆಂದರೆ ಎಲ್ಲರ ಮನದಲ್ಲಿ ಸಂತಸದ ಭಾವ ಮನೆಮಾಡಲಾರಂಭಿಸುತ್ತವೆ. ಹಲವಾರು ಸುಮಧುರ ನೆನಪುಗಳು ಮರು ಕಳಿಸುತ್ತವೆ.

Advertisement

ಗಾಳಿ ಮಿಂಚು ಗುಡುಗು ಸಿಡಿಲಿನ ಆರ್ಭಟಕ್ಕೆ ಮೂಡುವ ಆತಂಕ, ತಂಪಾಗಿ ಬೀಸುವ ಗಾಳಿ ಜತೆಗೆ ಜಿಟಿ-ಜಿಟಿ ಸದ್ದು ಮಾಡುವ ಮಳೆಹನಿ ಮನದಲ್ಲಿ ಬಾಲ್ಯದ ನೆನಪುಗಳು ಒಂದು ಕ್ಷಣ ಕಣ್ಮುಂದೆ ಬಂದು ಹೋಗುತ್ತದೆ. ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ. ಮಕ್ಕಳ ಪಾಲಿಗೆ ಮಳೆ ಅನ್ನೋದು ಗೆಳೆಯ ರೊಂದಿಗೆ ಕೊಡೆ-ರೈನ್‌ ಕೋ ಟ್‌ ತೆಗೆದುಕೊಂಡು ಹೋಗುವುದೇ ಒಂದು ಖುಷಿ.

ಬಹುದಿನಗಳಿಂದ ಬಾರದ ಮಳೆಗೆ ನೆಲದಲ್ಲಿ ಕುಳಿತು ಬಾನಿನಡೆಗೆ ದಿನಾಲು ಕಣ್ಣ ಹಾಯಿಸಿತ್ತಿರುವ ರೈತನಿಗೆ ಆಕಾಶದಲ್ಲಿ ಕರಿಮೋಡ ಕಂಡೊಡನೆ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಹೀಗೆ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಮಳೆ ಬಂದರೆ ಖುಷಿಗೆ ಪಾರವೇ ಇಲ್ಲ.

ನನಗಂತು ಮಳೆ ಬಂತೆಂದರೆ ಸಾಕು. ನನ್ನ ಬಾಲ್ಯದ ಸವಿನೆನಪು ಕಣ್ಮುಂದೆ ಬರುತ್ತದೆ. ನಾನು ಚಿಕ್ಕವಳಿರುವಾಗ ಮಳೆ ಬಂತು ಅಂದರೆ ಖುಷಿಯೋ ಖುಷಿ ಏಕೆಂದರೆ ಶಾಲೆಯಿಂದ ಮನೆಗೆ ಬರುವಾಗ ಮಳೆ ಬಂತು ಅಂದರೆ ಸಾಕು ಮಳೆಯಲ್ಲಿ ನೆನೆಯುತ್ತಾ ಗೆಳತಿಯರೊಡನೆ ಪುಸ್ತಕದ ಹಾಳೆಯನ್ನು ಹರಿದು ಅದರಿಂದ ದೋಣಿಯನ್ನು ಮಾಡಿ ರೋಡಲ್ಲಿ ಹರಿಯುವ ನೀರಿಗೆ ದೋಣಿಯನ್ನು ತೇಲಿ ಬಿಡುತ್ತಾ ನೀರಾಟ ಆಡಿಕೊಂಡು ಬರುವುದೇ ಒಂದು ಮಜಾ.

ಯಾರದು ದೋಣಿ ಮುಂದೆ ಹೋಗಿರುತ್ತದೆ ಅವರ ದೋಣಿಯನ್ನು ನೀರಿನಲ್ಲಿ ಮುಳುಗಿಸಿ ಬಿಡುತ್ತಿದ್ದೇವು ಅದು ಅವರಿಗೆ ಗೊತ್ತಿರುತ್ತಿರಲಿಲ್ಲ. ಅವಳಿಗೆ ನಿನ್ನ ದೋಣಿ ಮುಳುಗಿತು ಅಂತ ಸಿಕ್ಕಾಪಟ್ಟೆ ಕಾಡಿಸುತ್ತಿದ್ವಿ ಪಾಪ ಅವಳು ನನ್ನ ದೋಣಿ ನೀರಿನಲ್ಲಿ ಮುಳುಗಿಹೋದ ಅಂತ ಅಳುತ್ತಿದ್ದಳು.

Advertisement

ಹೀಗೆ ಮಳೆ ಬಂತು ಅಂದರೆ ಸಾಕು ತಲೆಯೆತ್ತಿ ನೇರವಾಗಿ ಸುರಿಯುವ ಮಳೆಗೆ ನಾಲಿಗೆ ಚಾಚಿ ಮಳೆಹನಿಗಳು ಕುಡಿದು ಕೆಸರು ಕಂಡರೆ ಸಾಕು ಜಿಗಿದಾಡುವ ಕೆಸರಾಟ. ಅಲ್ಲಲ್ಲಿ ನಿಂತ ನೀರಿನಲ್ಲಿ ಆಗ ತಾನೆ ಮೊಟ್ಟೆಯೊಡೆದು ಹೊರಬಂದ ಮರಿಗಳನ್ನು ಮೀನುಗಳು ಎಂದು ತಿಳಿದು ಆಶ್ಚರ್ಯವೆಂಬಂತೆ ನೋಡುತ್ತಿದ್ದ ಕ್ಷಣಗಳು ರೋಡಿನಲ್ಲಿ ಗಾಡಿಗಳ ಹಾಯ್ದು ಹೋಗಬೇಕಾದರೆ ಅದರಲ್ಲಿದ್ದ ಪೆಟ್ರೋಲ್‌ ರೋಡ್‌ ಮೇಲೆ ಬಿದ್ದಾಗ ಅದು ವಿವಿಧ ಬಣ್ಣಗಳ ಮಿಶ್ರಣ ಮಾಡಿ ಹಾಕಿದ ಹಾಗೆ ಕಾಣುತ್ತಿತ್ತು. ಅದನ್ನು ಕಂಡ ನಾವು ಕಾಮನಬಿಲ್ಲು ಎಂದು ತಿಳಿದು ಕಿರುಚಾಡಿದ ಕ್ಷಣಗಳು ಇಂದಿಗೂ ಹಚ್ಚ ಹಸಿರಾಗಿವೆ

ಮಳೆಯಲ್ಲಿ ನೆನೆದು ಬಟ್ಟೆಯನ್ನೆಲ್ಲ ಕೊಳೆ ಮಾಡಿಕೊಂಡು ಬಂದ ನಮಗೆ, ಮನೆಗೆ ಬರುತ್ತಲೇ ಬೈಗುಳ ಖಾಯಂ ಆಗಿರುತ್ತಿದ್ದವು. ಬೈಯುತ್ತಲೇ ಅಮ್ಮ ನಮಗೆ ಟವೆಲ್‌ ತೆಗೆದುಕೊಂಡು ಬಂದು ತಲೆಮರೆಸಿ ನಮಗೆ ಬಿಸಿಬಿಸಿಯಾದ ತಿಂಡಿಗಳನ್ನು ಮಾಡಿಕೊಡುತ್ತಿದ್ದಳು, ತಿಂಡಿ ತಿನ್ನುತ್ತ ನನಗಷ್ಟೇ ಬೈಯ್ಯುತ್ತಿ ನಿನ್ನ ದೊಡ್ಡ ಮಗಳಿಗೆ ಬೈಯೋದಿಲ್ಲ ಆಕಿ ಅಷ್ಟೇ ನಿನ್‌ ಮಗಳು ತಗೋ ಅಂತ ಅಂತಿದ್ದೆ. ಇವಾಗ ಇವನ್ನೆಲ್ಲ ನೆನಪಿಸಿಕೊಂಡರೆ ತುಂಬಾನೇ ನಗುಬರುತ್ತದೆ.

ಹೀಗೆ ಮಳೆ ಬಂತೆಂದರೆ ಸುರಿಯುವ ಮಳೆ ಹನಿಗಳ ಜೊತೆ ಅವಿಸ್ಮರಣೀಯ ಸಂಬಂಧ ತುಂಟಾಟ ತರ್ಲೆ ಮರೆಯಲಾಗದ ನೆನಪುಗಳು ಮತ್ತೆ ಮತ್ತೆ ನೆನಪಿನ ಬುತ್ತಿಯನ್ನು ಬಿಚ್ಚಿಡುವ ಹಾಗೆ ಮಾಡುವ ಕಾಲವನ್ನು ಮರೆಯಲು ಸಾಧ್ಯವೇ ಇಲ್ಲ.

ಸೌಭಾಗ್ಯ

ನಾಗರಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next