Advertisement

Dream: ಕಾಣುವ ಕನಸು ದೊಡ್ಡದಿರಲಿ

12:58 PM May 31, 2024 | Team Udayavani |

ಕನಸು …ಇದು ನಮ್ಮನ್ನು ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇದರಿಂದ ನಮಗೆ ಖುಷಿಯನ್ನು ಕೊಡುತ್ತದೆ ದುಃಖವನ್ನು ಕೊಡುತ್ತದೆ ಭಯವನ್ನು ತರಿಸುತ್ತದೆ ಧೈರ್ಯವನ್ನು ಕೊಡುತ್ತದೆ. ಇದು ಬರುವುದು ಕೆಲವು ನಿಮಿಷಗಳು ಆದರೂ ಇದರ ಪರಿಣಾಮ ಬೇರೇನೇ ಇರುತ್ತದೆ.

Advertisement

ನನಗೆ ತಿಳಿದ ಹಾಗೆ ಕನಸಿನಲ್ಲಿ ಎರಡು ವಿಧ. ಒಂದು ನಿದ್ರೆ ಮಾಡುವಾಗ ಬರುವ ಕನಸು ಇನೊಂದು ನಮಗೆ ನಿದ್ರೆ ಮಾಡಲು ಬಿಡದ ಕನಸು… ಮನುಷ್ಯನು ಭವಿಷ್ಯದ ಬಗೆ ಕನಸು ಕಾಣುವುದು ಸಹಜ, ಆದರೆ ಅದೇ ಕನಸನ್ನು ದೊಡ್ಡದಾಗಿ ಕಾಣಬೇಕು ನಾವು ಅದನು ನನಸಾಗಿಸುವ ಹಾದಿಯಲ್ಲಿ ನಮ್ಮ ಜೀವನವನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದನು.

ಇದನು ತಿಳಿದ ನಾನು ನನ್ನ ಕನಸನ್ನು ದೊಡ್ಡದಾಗಿಸಿದೆ, ಅನೇಕ ನಕಾರಾತ್ಮಕ ಸಮಸ್ಯೆಗಳು ಕಂಡರೂ ಕೂಡ ಆ ಕನಸಿನ ಕಡೆ ಗಮನ ಹರಿಸಲಾರಂಭಿಸಿದೆ.

ನಮಗೆ ನಿದ್ರೆ ಮಾಡುವಾಗ ಬೀಳುವ ಕನಸುಗಳು ಕ್ಷಣಿಕವಾಗಿರುತ್ತದೆ. ನಮ್ಮ ಹಿಂದಿನ ದಿನಗಳ ಯೋಚನೆಯಿಂದ ಬೀಳುತ್ತವೆ ಎನ್ನುವುದು ನನ್ನ ಅನುಭವ. ಆದರೆ ನಾವು ನಿದ್ರೆ ಮಾಡಲು ಬಿಡದ ಕನಸಿನ ಬಗೆ ನೆನಸಿಕೊಂಡಾಗ, ನನಗೆ ನನ್ನ ಸ್ನೇಹಿತ ನೆನಪಾಗುತ್ತಾನೆ. ಒಂದೇ ಊರಿನ ನಮ್ಮ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಜತೆಯಲ್ಲೆ ಓದಿರುವ ಸ್ನೇಹಿತ, ನೋಡಿ. ಕನ್ನಡ ಮಾಧ್ಯಮ ಶಾಲೆ ಎಂದು ಹೇಳಲು ಇಂದು ನನಗೆ ಹೆಮ್ಮೆಯಾಗುತ್ತದೆ ಏಕೆಂದರೆ.. ನಾವು ಎಲ್ಲಿಯವರೆಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿರುತೇವೋ ಅಲ್ಲಿಯವರೆಗೂ ನಮಗೆ ಆದಂತಹ ಅನುಭವ ಮತ್ತು ನಮಗೆ ಸಿಕ್ಕಂತಹ ಶಿಕ್ಷಕರು ಮತ್ತು ಪರಿಚಯ ಆದ ಸ್ನೇಹಿತರನ್ನು ಮರೆಯಲಾಗುವುದಿಲ್ಲ. ಅಲ್ಲಿ ನಮಗೆ ಶಿಕ್ಷಣದ ಜತೆಗೆ ಜೀವನ ಪಾಠಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ.

ಅಲ್ಲಿ ನನಗೆ ಪರಿಚಯ ಆದ ಸ್ನೇಹಿತರಲ್ಲಿ ಇವನು ಒಬ್ಬ, ನಮ್ಮ ಹಳ್ಳಿ ಶಾಲೆಯಲ್ಲಿ ಒಂದು ತರಗತಿಗೆ ಹತ್ತು- ಹದಿನೈದು ಜನ ಮಕ್ಕಳು, ನಮ್ಮ ತರಗತಿಯಲ್ಲಿ ನಾವು ಮೂರು ಜನ ಅತಿ ದಡ್ಡ ವಿದ್ಯಾರ್ಥಿಗಳು,ಶಿಕ್ಷಕರ ಪ್ರಕಾರ. ಅದರಲ್ಲೇ ನನ್ನ ಸ್ನೇಹಿತನು ಒಬ್ಬ, ನಮಗೆ ಶಿಕ್ಷಕರು ಹೇಳುತ್ತಿದ್ದರು.. ಎಲ್ಲರೂ ಶಿಕ್ಷಣ ಪಡೆದು ದೊಡ್ಡ

Advertisement

ದೊಡ್ಡ ಹುದ್ದೆಗೆ ಹೋದರೆ, ಕೂಲಿ ಕೆಲಸ ಮಾಡುವವರು ಯಾರು..? ಅದಕ್ಕೆ ಮುಂದೆ ನೀವೆಲ್ಲಾ ಉಪಯೋಗಕ್ಕೆ ಬರುವಿರಿ ಎನುತ್ತಿದರು, ಇಂಥ ಕೆಲವು ಅವಮಾನಗಳೇ… ನನ್ನ ಸ್ನೇಹಿತನಿಗೆ ಭವಿಷ್ಯದ ಬಗೆ ಕನಸು ಕಾಣಲು ಸಹಾಯಕವಾಗಿತೆಂದು ಭಾವಿಸುತ್ತೇನೆ, ಅವನು ಅಭ್ಯಾಸ ಮಾಡುತ್ತಾ ಮಾಡುತ್ತಾ..ಅವನ ವಿಚಾರಧಾರೆಗಳು ಹೆಚ್ಚಾಗುತ್ತಾ ಕನಸು ದೊಡ್ಡದಾಗುತ್ತಾ ಹೋಗಿತು.

ಅವನು ನಾನೊಂದಿಗೆ ಹೇಳಿಕೊಳ್ಳುತ್ತಿದ್ದಳು ಅವನ ಕನಸಿನ ಬಗೆ ಅದನು ನನಸಾಗಿಸಲು ಅವನ ಪ್ರಯತ್ನದ ಬಗೆ, ಅಂದು ದಡ್ಡ ವಿದ್ಯಾರ್ಥಿ ಇಂದು ದೊಡ್ಡ ಹುದ್ದೆಯಲ್ಲಿದ್ದಾನೆ ಇದಕ್ಕೆ ಕಾರಣ ಅವನು ಕಾಣುತ್ತಿದ್ದ ಕನಸು ಮತ್ತು ಅದನು ನನಸಾಗಿಸಲು ಮಾಡಿದ ಅವನು ಪ್ರಯತ್ನ.., ಕೆಲವೊಂದು ಸಾಧಕರನ್ನು ನೋಡಿದಾಗ ಅವರಲ್ಲಿ ಕಾಣುವ ಖುಷಿಗಿಂತ “ಪರಿಶ್ರಮವೇ ಜೀವನ” ಅನಿಸುತ್ತದೆ ನನಗೆ, ಅವರ ಸಾಧನೆಗೆ ಕಾರಣ ಅವರು ತಮ್ಮ ಸುಖ ನಿದ್ರೆಯನ್ನು ತ್ಯಜಿಸಿ, ನಿದ್ರೆ ಗೆಡಿಸುವಂತಹ ಕನಸು ಕಂಡಿದ್ದಕ್ಕೆ, ಮತ್ತೆ ಮತ್ತೆ ಹೇಳುತ್ತೇನೆ.. ನಮ್ಮ ಭವಿಷ್ಯದ ಕನಸು ದೊಡ್ಡದಾಗಿರಲಿ ಅದನು ನನಸಾಗಿಸುವ ಛಲ ಅಷ್ಟೇ ದೃಢವಾಗಿರಲಿ.

 -ಭರತ್‌ ವಾಸು ನಾಯ್ಕ

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next