Advertisement

16 ಟ್ರೇಲರ್‌ ಕಬ್ಬು ಸಾಗಿಸಿ ದಾಖಲೆ ಬರೆದ ಉತ್ತೂರ ರೈತ

11:24 PM Feb 14, 2020 | Lakshmi GovindaRaj |

ಮುಧೋಳ: ತಾಲೂಕಿನ ಉತ್ತೂರ ಗ್ರಾಮದ ರೈತ ಪುಂಡಲೀಕ ಕೊಳೂರ ಒಂದೇ ಬಾರಿಗೆ 16 ಟ್ರೇಲರ್‌ ಜೋಡಿಸಿ ಸಮೀಪದ ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌ (ಐಸಿಪಿಎಲ್‌) ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ಸಾಧೆನೆಗೈದಿದ್ದಾರೆ. 16 ಕಾರ್ಮಿಕರೊಳಗೊಂಡ ತಂಡ 16 ಟ್ರೇಲರ್‌ ಕಬ್ಬು ಹೇರಿದ್ದರು.

Advertisement

ಈ ಹಿಂದೆ ಗೋಕಾಕ ತಾಲೂಕಿನ ಸುಣದೋಳಿ ರೈತ ರೊಬ್ಬರು 10 ಟ್ರೇಲರ್‌ ಕಬ್ಬು ಹೇರುವ ಮೂಲಕ ದಾಖಲೆ ನಿರ್ಮಿಸಿದ್ದರು. ಕೆಲ ದಿನಗಳ ಹಿಂದೆ ಉತೂ ರಿನ ರೈತ ಸತ್ಯಪ್ಪ ರಾಮಪ್ಪ ಕಾತರಕಿ 12 ಟ್ರೇಲರ್‌ ಕಬ್ಬು ತುಂಬಿ ಉತ್ತೂರ ಐಸಿಪಿಎಲ್‌ ಸಕ್ಕರೆ ಕಾರ್ಖಾನೆಗೆ 6 ಕಿ.ಮೀ.ವರೆಗೆ ಜಗ್ಗಿಸಿ ಗಮನ ಸೆಳೆದಿದ್ದರು.

ಇದೀಗ ಅದೇ ಗ್ರಾಮದ ಪುಂಡಲೀಕ ಕೊಳೂರ ಅವರ ವಾಹನ 16 ಟ್ರೇಲರ್‌ಗಳ ಮೂಲಕ 6 ಕಿ.ಮೀ. ಸಾಗಿಸಿದ್ದಾರೆ. ರೈತನ ಸಾಧನೆಗೆ ಗ್ರಾಮಸ್ಥರು ರಸ್ತೆಯುದ್ದಕ್ಕೂ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಸತ ವ್ಯಕ್ತಪಡಿಸಿದರು. ಬಳಿಕ ನೂತನ ದಾಖಲೆ ನಿರ್ಮಿಸಿದ ಪುಂಡಲೀಕ ಕೊಳೂರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next