Advertisement

Uttarkashi tunnel: ಕಾರ್ಮಿಕರು ಹೊರಬರಲು ಕ್ಷಣಗಣನೆ; ಭರದಿಂದ ಸಾಗುತ್ತಿದೆ ಕಾರ್ಯಾಚರಣೆ

08:42 AM Nov 23, 2023 | Team Udayavani |

ಹೊಸದಿಲ್ಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ ಸುರಂಗದಲ್ಲಿ ವಾರಗಳಿಂದ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಒಳಗಿರುವ 44 ಮಂದಿ ಕಾರ್ಮಿಕರನ್ನು ಹೊರ ತರುವ ಕಾರ್ಯಚರಣೆ ಸಾಗುತ್ತಿದ್ದು, ಕೆಲವೇ ಗಂಟೆಗಳಲ್ಲಿ ಕಾರ್ಮಿಕರು ಹೊರಬರಲಿದ್ದಾರೆ. ಸುರಂಗದಲ್ಲಿ ಹೊರಭಾಗದಲ್ಲಿ ಹಲವು ಆ್ಯಂಬುಲೆನ್ಸ್ ಗಳು ನಿಂತಿದ್ದು, ರಕ್ಷಣೆ ಮಾಡಿದ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲು ಸಜ್ಜಾಗಿದೆ.

Advertisement

ಕಲ್ಲಿನ ರಾಶಿಗಳಿಗೆ ಅಡ್ಡಲಾಗಿ ಕೊರೆಯುವ ಮೂಲಕ 44 ಮೀಟರ್‌ಗಳ ಪೈಪ್‌ ಗಳನ್ನು ಸೇರಿಸಲಾಯಿತು, ಆದರೆ ಅದರೊಳಗೆ ಯಂತ್ರದಿಂದ ಕತ್ತರಿಸಲು ಸಾಧ್ಯವಾಗದ ಉಕ್ಕಿನ ರಾಡ್‌ ಗಳು ಪತ್ತೆಯಾದವು. ಎನ್‌ಡಿಆರ್‌ಎಫ್ ಸಿಬ್ಬಂದಿ ಆ ರಾಡ್‌ಗಳನ್ನು ಕತ್ತರಿಸುತ್ತಾರೆ, ನಂತರ ನಾವು ಯಂತ್ರವನ್ನು ಮತ್ತೆ ಬಳಸುತ್ತೇವೆ” ಎಂದು ರಕ್ಷಣಾ ಅಧಿಕಾರಿ ಹರ್ಪಾಲ್ ಸಿಂಗ್ ಬುಧವಾರ ರಾತ್ರಿ ಹೇಳಿದ್ದಾರೆ.

ಮುಂದಿನ 5 ಗಂಟೆಗಳಲ್ಲಿ ಎರಡು ಪೈಪ್‌ಗಳು ಹೋಗಲು ದಾರಿ ಮಾಡಿಕೊಡಲು ಒಂದು ಗಂಟೆಯಲ್ಲಿ ರಾಡ್‌ ಗಳನ್ನು ಕತ್ತರಿಸಬಹುದು ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಸಿಂಗ್ ಹೇಳಿದರು. ರಕ್ಷಣಾ ತಂಡವು ಸಿಕ್ಕಿಬಿದ್ದ ಕಾರ್ಮಿಕರನ್ನು ಬೆಳಿಗಿನ ಹೊತ್ತಿಗೆ ತಲುಪಬಹುದು ಎಂದು ಅವರು ರಾತ್ರ ವಿಶ್ವಾಸ ವ್ಯಕ್ತಪಡಿಸಿದ್ದರು..

ಮಿಷನ್‌ನ ಅಂತಿಮ ಹಂತವು ತೆರೆದುಕೊಳ್ಳುತ್ತಿದ್ದಂತೆ ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ರುಹೇಲಾ ಸ್ಥಳಕ್ಕೆ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next