Advertisement

ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

10:34 PM Oct 07, 2022 | Team Udayavani |

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಹಿಮಪಾತದಿಂದ ಅಸುನೀಗಿದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

Advertisement

ಶುಕ್ರವಾರದ ಶೋಧದ ವೇಳೆ ಇನ್ನೂ ಹತ್ತು ಮೃತದೇಹಗಳು ಪತ್ತೆಯಾಗಿವೆ. ಇದೇ ವೇಳೆ, ಖ್ಯಾತ ಪರ್ವತಾರೋಹಿ ಸವಿತಾ ಕನ್ಸಾಲ್‌ ಸೇರಿದಂತೆ ನಾಲ್ವರ ಮೃತದೇಹಗಳನ್ನು ಅವರವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಎವರೆಸ್ಟ್‌ ಮತ್ತು ಮೌಂಟ್‌ ಮಕಾಲು ಅನ್ನು ಹದಿನೈದು ದಿನಗಳ ಅವಧಿಯಲ್ಲಿ ಈ ವರ್ಷ ಏರಿ ದಾಖಲೆಯನ್ನು ಸವಿತಾ ಕನ್ಸಾಲ್‌ ಸ್ಥಾಪಿಸಿದ್ದರು. ಉತ್ತರಕಾಶಿಯಲ್ಲಿ ಇರುವ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಈ ಪ್ರಕ್ರಿಯೆ ನಡೆಸಲಾಗಿದೆ.

ಇದೇ ವೇಳೆ, ಕರ್ನಾಟಕದ ವಿಕ್ರಂ ಎಂ, ರಕ್ಷಿತ್‌ ಕೆ. ಅವರ ಸುಳಿವು ಇನ್ನೂ ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next