Advertisement

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

12:56 AM Jul 20, 2024 | Team Udayavani |

ಡೆಹ್ರಾಡೂನ್‌: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕೇದರಾನಾಥ ದೇಗುಲ ಮಾದರಿಯಲ್ಲಿ ನಿರ್ಮಾಣ ಮಾಡುವ ವಿಚಾರ ವಿವಾದಕ್ಕೀಡಾದ ಬೆನ್ನಲ್ಲೇ, ಉತ್ತರಾಖಂಡ ಸರಕಾರವು ಚಾರ್‌ಧಾಮ್‌ ಸೇರಿದಂತೆ ತನ್ನ ರಾಜ್ಯದ ಪ್ರಮುಖ ದೇಗುಲಗಳ ಹೆಸರು ದುರುಪಯೋಗ ಆಗದಂತೆ ತಡೆಯಲು ಕಾನೂನು ರೂಪಿಸಲು ಮುಂದಾಗಿದೆ. ಈ ಬಗ್ಗೆ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

Advertisement

ಉದ್ದೇಶಿತ ಕಾನೂನಿನಲ್ಲಿ ಚಾರ್‌ಧಾಮ್‌ಗಳಾದ ಕೇದಾರನಾಥ, ಬದರೀನಾಥ, ಯಮುನೋತ್ರಿ, ಗಂಗೋತ್ರಿ ದೇಗುಲಗಳು ಹೆಸರು ಸೇರಿದಂತೆ ಉತ್ತರಾಖಂಡದ ಯಾವುದೇ ಪ್ರಮುಖ ದೇಗುಲಗಳ ಹೆಸರನ್ನು ಬೇರೆ ದೇಗುಲ ಆಡಳಿತ ಮಂಡಳಿಗಳಾಗಲಿ, ಟ್ರಸ್ಟ್‌ಗಳಾಗಲಿ ಬಳಸುವಂತಿಲ್ಲ ಎಂದು ನಿಯಮ ರೂಪಿಸಲಿದೆ. ಒಂದೇ ತರನಾದ ಹೆಸರುಗಳು ಭಕ್ತರಲ್ಲಿ ಗೊಂದಲ ಮೂಡಿಸುವುದರ ಜತೆಗೆ ಭಕ್ತರ ಧಾರ್ಮಿಕ ಭಾವೆನಗಳಿಗೂ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಈ ಕಾನೂನು ರೂಪಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಪುಷ್ಕರ್‌ ಸಿಂಗ್‌ ಅವರ ಕಾರ್ಯದರ್ಶಿ ಶೈಲೇಶ್‌ ಬಗೌಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next