Advertisement

ಉತ್ತರಾಖಂಡ್: ಪಕ್ಷ ವಿರೋಧಿ ಚಟುವಟಿಕೆ-ನಾಲ್ವರು ಬಿಜೆಪಿ ಸದಸ್ಯರಿಗೆ ಗೇಟ್ ಪಾಸ್

09:29 AM Oct 09, 2019 | Team Udayavani |

ನವದೆಹಲಿ: ಶಿಸ್ತುಪಾಲನೆ ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಭಾರತೀಯ ಜನತಾಪಕ್ಷದ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಉತ್ತರಾಖಂಡ್ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶ್ರೀಮತಿ ಮಾಯ ಪಂತ್, ಶ್ರೀಮತಿ ಉಮಾ ದಾಬ್ರಾಲ್, ಗೋವಿಂದ್ ಸಿಂಗ್ ಜಿಮ್ವಾಲ್ ಮತ್ತು ಹರೀಶ್ ಭಂಡಾರಿ ಸೇರಿದಂತೆ ನಾಲ್ವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಬಿಜೆಪಿ ಪಕ್ಷದ ಶಿಸ್ತುಪಾಲನೆ ಉಲ್ಲಂಘಿಸಿದಂತಾಗಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಜಾರಿಗೆ ಬರುವಂತೆ ನಾಲ್ವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next