Advertisement

Uttara Kannada: ಜಿ.ಟಿ.ನಾಯ್ಕರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಅಭಿಮಾನಿಗಳ ಆಗ್ರಹ

07:43 PM Oct 04, 2023 | Team Udayavani |

ಕಾರವಾರ : ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರಕ್ಕೆ ಖ್ಯಾತ ವಕೀಲ ಜಿ.ಟಿ.ನಾಯ್ಕರಿಗೆ ಟಿಕೆಟ್ ನೀಡುವಂತೆ ಜಿ.ಟಿ.ಎನ್ ಅಭಿಮಾನಿ ಬಳಗ ಆಗ್ರಹ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದೆ.

Advertisement

ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಟಿ.ನಾಯ್ಕ ಅಭಿಮಾನಿ ಬಳಗದ ಶ್ರೀಕಾಂತ ಮೊಗೇರ ಅವರು , ಜಿಲ್ಲೆಯ ಖ್ಯಾತ ಹಾಗೂ ಹಿರಿಯ ವಕೀಲರೂ ಆಗಿರುವ ಜಿ.ಟಿ.ನಾಯ್ಕ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸಮಾಜಮುಖಿ ಕಾರ್ಯ ಮಾಡುತ್ತಿರುವ ಅವರು ಹಲವು ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿ, ಬಡ ಕುಟಂಬಗಳಿಗೆ ಸಹಾಯ- ಸಹಕಾರ ನೀಡಿ ನೆರವಾಗಿದ್ದಾರೆ. ಅವರಿಗೆ ಕಾನೂನಿನ ಅರಿವೂ ಇದ್ದು, ಲೋಕಸಭೆಯಲ್ಲಿ ಮಂಡನೆಯಾಗುವ ಕಾಯಿದೆಗಳಿಗೆ ಸಂಬಂಧಿಸಿ ಸಮರ್ಥ ವಾದ ಮಂಡಿಸಿಬಲ್ಲರು. ಜಿಲ್ಲೆಯ ಅಭಿವೃದ್ಧಿಗೆ ಚರ್ಚಸಿ ನೆರವಾಗಬಲ್ಲರು ಎಂದರು.

ಒಂದು ವೇಳೆ ಜಿ.ಟಿ.ನಾಯ್ಕ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲುವು ಖಚಿತ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಜಿ.ಟಿ.ನಾಯ್ಕರು ಸಕ್ರಿಯರಾಗಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೂ ಒತ್ತು ನೀಡಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಾಯಕ ಹರಿಕಂತ್ರ, ವಿನಯ ಬಾನಾವಳಿ, ಕಿಶೋರ ಬಾನಾವಳಿ, ಅಜಯ, ರೋಷನ್ ಬಾನಾವಳಿ, ಸಚಿನ್ ಹರಿಕಂತ್ರ, ತೌಫೀಕ ಸಯ್ಯದ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next