Advertisement

ಇಬ್ಬರು ಉಗ್ರರ ಬಂಧನ, ಭಾರೀ ಸಂಚು ವಿಫಲ: ಉ.ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ

08:40 AM Jul 12, 2021 | Team Udayavani |

ಲಕ್ನೋ: ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ಇಬ್ಬರು ಉಗ್ರರನ್ನು ಬಂಧಿಸಿದ ಬಳಿಕ ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ ಖೈದಾ ಸಂಘಟನೆಯಿಂದ ಬೆಂಬಲ ಪಡೆಯುತ್ತಿರುವ ಅನ್ಸರ್ ಗಝ್ವಾತುಲ್ ಹಿಂದ್ ಸಂಘಟನೆಯ ಇಬ್ಬರು ಉಗ್ರರನ್ನು ರವಿವಾರ ಲಕ್ನೋದಲ್ಲಿ ಬಂಧಿಸಲಾಗಿತ್ತು.

Advertisement

ಈ ಘಟನೆಯ ಬಳಿಕ ಉತ್ತರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹರ್ದೋಯ್, ಸೀತಾಪುರ, ಬಾರಬಂಕಿ, ಉನ್ನಾವ್ ಮತ್ತು ರಾಯ್ ಬರೇಲಿ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಲಕ್ನೋದಲ್ಲಿ ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಎರಡು ವಿಳಾಸಗಳ ಮೇಲೆ ದಾಳಿ ನಡೆಸಿ ಇಬ್ಬರನ್ನು ರವಿವಾರ ಬಂಧಿಸಲಾಗಿತ್ತು. ಆ ವಿಳಾಸಗಳಲ್ಲಿದ್ದ ಏಳು ಜನರಲ್ಲಿ ಐವರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ, ಲಕ್ನೋ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಶಂಕಿತರನ್ನು ಬಂಧಿಸುವ ಪ್ರಯತ್ನದಲ್ಲಿ ಈ ಭದ್ರತಾ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ರಾಜ್ಯದ ಹಿತಕ್ಕಾಗಿ ಒಗ್ಗಟ್ಟು : ಉದಯವಾಣಿ ವೇದಿಕೆಯಲ್ಲಿ ನೂತನ ಕೇಂದ್ರ ಸಚಿವರ ಸಮಾಗಮ

ಬಂಧಿತ ಉಗ್ರರನ್ನು ಮಿನ್ಹಾಜ್‌ ಅಹ್ಮದ್‌, ಮಸೀರುದ್ದೀನ್‌ ಎಂದು ಗುರುತಿಸಲಾಗಿದೆ. ಅವರು ಪ್ರಶರ್‌ ಕುಕ್ಕರ್‌ ಬಾಂಬ್‌ ತಯಾರಿಸಲೂ ಸಿದ್ಧತೆ ನಡೆಸಿದ್ದರು. ಮಾನವ ಬಾಂಬ್‌ ಮೂಲಕ ಆ.15ರ ಮೊದಲು ರಾಜಧಾನಿ ಲಕ್ನೋ ಸೇರಿದಂತೆ ವಿವಿಧ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಉ.ಪ್ರ.ದ ಎಡಿಜಿಪಿ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ

Advertisement

ಉಗ್ರರು ಕೆಲವು ಬಿಜೆಪಿ ನಾಯಕರ ಮೇಲೆ ಕೂಡ ದಾಳಿ ನಡೆಸಲು ಮುಂದಾಗಿದ್ದರು ಎಂದು ಪ್ರಶಾಂತ್‌ ತಿಳಿಸಿದ್ದಾರೆ. ಲಕ್ನೋ ಮತ್ತು ಕಾನ್ಪುರದಲ್ಲಿ ಕೂಡ ಈ ಸಂಘಟನೆಗೆ ಸೇರಿದವರು ಇದ್ದಾರೆ. ಅಹ್ಮದ್‌ ಎಂಬಾತನ ನಿವಾಸದಿಂದ ಸ್ಫೋಟಕಗಳು ಮತ್ತು ಪಿಸ್ತೂಲ್‌, ಮಸೀರುದ್ದೀನ್‌ನ ನಿವಾಸದಿಂದ ಸ್ಫೋಟಕಗಳು ಮತ್ತು ಪ್ರಶರ್‌ ಕುಕ್ಕರ್‌ ಅನ್ನು ಉಗ್ರ ನಿಗ್ರಹ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಿನಾಜ್‌ ಅಹ್ಮದ್‌ ಎಂಬಾತನಿಗೆ ಪಾಕಿಸ್ತಾನದ ಪೇಶಾವರ ಮತ್ತು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಭಾಗದ ನಗರ ಕ್ವೆಟ್ಟಾದಿಂದ ಸೂಚನೆಗಳು ರವಾನೆಯಾಗುತ್ತಿದ್ದವು ಎಂದು ಪ್ರಶಾಂತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next