Advertisement

ಸ್ವಾಮಿ ಪ್ರಸಾದ್ ಮೌರ್ಯ ಒಬ್ಬ ಅವಕಾಶವಾದಿ: ಕಿಡಿ ಕಾರಿದ ಬೇಬಿ ರಾಣಿ ಮೌರ್ಯ

04:53 PM Mar 27, 2022 | Team Udayavani |

ಹೊಸದಿಲ್ಲಿ: ದಲಿತರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಯೋಗಿ ಆದಿತ್ಯನಾಥ್ ಅವರ 2.0 ಸಂಪುಟದ ಹಿರಿಯ ಸಚಿವೆ ಬೇಬಿ ರಾಣಿ ಮೌರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಎಎನ್‌ಐ ಜೊತೆ ಮಾತನಾಡಿ, ”ಸ್ವಾಮಿ ಪ್ರಸಾದ್ ಮೌರ್ಯ ಒಬ್ಬ ಅವಕಾಶವಾದಿ. ಅವಕಾಶಗಳನ್ನು ಹುಡುಕಿಕೊಂಡು ಬಂದಿದ್ದರು. ಅವರು ಮಾಡಬೇಕಾದುದನ್ನು ಮಾಡಿದ ನಂತರ ಅವರು ಹೋದರು ಮತ್ತು ಇಂದು ಅವರ ಸ್ಥಿತಿ ಏನಾಗಿದೆ ಎಂಬುದನ್ನು ನೀವೇ ನೋಡಿ, ”ಎಂದು ಉತ್ತರಾಖಂಡ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ ಬಿಜೆಪಿ ನಾಯಕಿ ಕಿಡಿಕಾರಿದ್ದಾರೆ.

ತಾನು ಉತ್ತರ ಪ್ರದೇಶದ ದಲಿತ ಭಾಗವಾದ ಜಾತವ್ ಸಮುದಾಯಕ್ಕೆ ಸೇರಿದ್ದೇನೆ ಮತ್ತು ಸಮುದಾಯವು ನನ್ನ ಮೇಲೆ ಹೆಚ್ಚಿನ ಭರವಸೆಯಿಂದ ಎದುರು ನೋಡುತ್ತಿದೆ ಎಂದರು. ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ವೇದಿಕೆ ಕಲ್ಪಿಸಿಕೊಟ್ಟ ಬಿಜೆಪಿಯನ್ನು ಶ್ಲಾಘಿಸಿದ ಅವರು, ಬಿಜೆಪಿಯವರು ನನ್ನನ್ನು ‘ಮೇಯರ್‌ನಿಂದ ರಾಜ್ಯಪಾಲೆಯನ್ನಾಗಿ ಮಾಡಿ ನಂತರ ಸಂಪುಟ ಸಚಿವೆಯನ್ನಾಗಿ ಮಾಡಿದರು, ನಾನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದೇನೆ ಎಂದರು.

ವಿಧಾನಸಭೆ ಚುನಾವಣೆಗೆ ತಿಂಗಳ ಮೊದಲು ಸ್ವಾಮಿ ಪ್ರಸಾದ್ ಮೌರ್ಯ ಅವರು ಕಾರ್ಮಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್‌ಪಿ ಸೇರಿದ್ದರು. ಆದರೆ, ಅವರು ಫಾಜಿಲ್‌ನಗರ ಕ್ಷೇತ್ರದಿಂದ ಬಿಜೆಪಿಯ ಸುರೇಂದ್ರ ಕುಮಾರ್ ಕುಶ್ವಾಹ ವಿರುದ್ಧ 45,000 ಮತಗಳಿಂದ ಸೋತರು.

Advertisement

Udayavani is now on Telegram. Click here to join our channel and stay updated with the latest news.

Next