Advertisement

ಪರ್ರಿಕರ್ ಮತ್ತು ಪಾರ್ಸೇಕರ್ ಹಠ ಮಾಡಿದರು : ಫಡ್ನವೀಸ್ ಬೇಸರ

11:50 AM Jan 30, 2022 | Team Udayavani |

ಪಣಜಿ: ಉತ್ಪಲ್ ಪರ್ರಿಕರ್ ಮತ್ತು ಲಕ್ಷ್ಮೀಕಾಂತ ಪಾರ್ಸೇಕರ್ ರವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಪಕ್ಷ ವಿಫಲವಾಗಿದೆ ಎಂದೇ ಹೇಳಬಹುದು ಎಂದು ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಪಲ್ ಪರ್ರಿಕರ್ ಮನೋಹರ್ ಪರ್ರಿಕರ್ ರವರ ಮಗ. ಅವರು ಯುವ ಮತ್ತು ಉತ್ತಮ ಕಾರ್ಯಕರ್ತ. ಅವರು ನಿಜವಾಗಿಯೂ ಪಕ್ಷದಲ್ಲಿಯೇ ಉಳಿಯಬೇಕಾಗಿತ್ತು. ಈ ನಿಟ್ಟಿನಲ್ಲಿ ಅವರೊಂದಿಗೆ ಚರ್ಚೆಯನ್ನೂ ನಡೆಸಿದ್ದೆ. ವಾಸ್ತವವಾಗಿ ಅವರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಆಯ್ಕೆಗಳನ್ನು ನೀಡಲಾಗಿತ್ತು, ಅವರು ಆಫರ್ ತಿರಸ್ಕರಿಸಿದ್ದು ನಿಜ. ಅವರು ಪಣಜಿ ಕ್ಷೇತ್ರವೇ ಬೇಕು ಎಂದು  ಹೇಳಿದ್ದರಿಂದ ಪಕ್ಷ ಏನೂ ಮಾಡಲು ಸಾಧ್ಯವಾಗಿಲ್ಲ ಎಂದರು.

ಉತ್ಪಲ್ ಪರ್ರಿಕರ್ ರವರಂತಹ ಯುವ ವ್ಯಕ್ತಿತ್ವ ಇರುವವರು ಪಕ್ಷಕ್ಕೆ ಬಹಳ ಮುಖ್ಯ. ಆದರೆ ಅವರ ಹಠಮಾರಿತನದಿಂದ ನಾವೇನೂ ಮಾಡಲು ಸಾಧ್ಯವಾಗಿಲ್ಲ ಎಂದರು.

ಲಕ್ಷ್ಮೀಕಾಂತ ಪಾರ್ಸೇಕರ್ ರವರು ಕೂಡ ಇದುವರೆಗೂ ಬಿಜೆಪಿಯಲ್ಲಿ ಹಲವಾರು ಉನ್ನತ ಹುದ್ದೆಯಲ್ಲಿದ್ದವರು. ಅವರು ಪಕ್ಷ ತೊರೆದಿರುವುದು ನಿಜಕ್ಕೂ ದುರದೃಷ್ಠಕರ ಸಂಗತಿ. ಪ್ರಸಕ್ತ ಚುನಾವಣೆಯಲ್ಲಿ ಸ್ಫರ್ಧಿಸುವುದನ್ನು ಬಿಟ್ಟು ಪಕ್ಷದಲ್ಲಿಯೇ ಯಾವುದೇ ಜವಾಬ್ದಾರಿ ನಿಭಾಯಿಸಬೇಕೆಂಬ ಇಚ್ಛೆ ಇದ್ದರೆ ಅವರಿಗೆ ಆ ಜವಾಬ್ದಾರಿ ನೀಡಲು ನಾವು ಸಿದ್ಧರಿದ್ದೆವು. ಅವರ ಪಕ್ಷ ತೊರೆಯುವ ನಿರ್ಧಾರ ದೃಢವಾಗಿದ್ದರಿಂದ ನಾವು ಏನೂ ಮಾಡಲು ಸಾಧ್ಯವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next