Advertisement

ನಿಮ್ಮದು ಬಹಳ ದಿನ ನಡೆಯಲ್ಲ : ಈಶ್ವರಪ್ಪ ವಿರುದ್ದ ಯು ಟಿ ಖಾದರ್ ಕೆಂಡಾಮಂಡಲ

01:38 PM Sep 18, 2019 | Team Udayavani |

ಬೆಂಗಳೂರು: ಈಶ್ವರಪ್ಪ ಅಲ್ಪ ಸಂಖ್ಯಾತರನ್ನು ಬಯ್ಯೋದೇ ದೇಶಭಕ್ತಿ ಅಂದುಕೊಂಡಿದ್ದಾರೆ ಇದು ಬಹಳ ದಿನ ನಡೆಯೋದಿಲ್ಲ ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತೆ  ಎಂದು ಮಾಜಿ ಸಚಿವ ಯು.ಟಿ ಖಾದರ್, ಸಚಿವ  ಕೆ.ಎಸ್. ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಈಶ್ವರಪ್ಪ ಡಿಸಿಎಂ ಸ್ಥಾನ ಸಿಗುತ್ತೆ, ಪವರ್ ಫುಲ್ ಸ್ಥಾನ ಸಿಗುತ್ತದೆ ಅನ್ನುವ ಉತ್ಸಾಹದಲ್ಲಿದ್ದರು. ಆದರೆ ಅದ್ಯಾವುದೂ ಆಗಿಲ್ಲ . ಹೀಗಾಗಿ ಕೋಪವನ್ನು ಅವರ ಮೇಲೆ ತೋರಿಸುವುದಕ್ಕೆ ಈಶ್ವರಪ್ಪಗೆ ಆಗುತ್ತಿಲ್ಲ. ಹೀಗಾಗಿ ನಮ್ಮ ಸಮುದಾಯದ ಮೇಲೆ ಕೋಪವನ್ನು ತೋರಿಸ್ತಿದ್ದಾರೆ. ಹಿಜಡಾ ಅಂತ ವ್ಯಂಗ್ಯ ಮಾಡಿದ್ದಾರಲ್ಲ, ಹಿಜಡಾಗಳ ಶಕ್ತಿ ಏನೂ ಅನ್ನೋದನ್ನು ಹಿಜಡಾ ಸಂಘಟನೆಗಳೇ ಈಶ್ವರಪ್ಪಗೆ ತೋರಿಸಲಿ ಅಂತ ಕರೆ ನೀಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next