Advertisement

ತನ್ವೀರ್ ಸೇಠ್ ಬಳಿಕ ‘ಹಿಟ್ ಲಿಸ್ಟ್‌ನಲ್ಲಿ’ ಯು.ಟಿ ಖಾದರ್‌ !: ಪೊಲೀಸ್ ಭದ್ರತೆ

09:49 AM Nov 25, 2019 | Team Udayavani |

ಮಂಗಳೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣ ಕುರಿತಾದ ಪೊಲೀಸ್ ತನಿಖೆಯಲ್ಲಿ ಅಘಾತಕಾರಿ ಮಾಹಿತಿ ಬಯಲಾಗಿದ್ದು ಮಾಜಿ ಸಚಿವ ಯು.ಟಿ ಖಾದರ್ ಮತೀಯ ಸಂಘಟನೆಯೊಂದರ `ಹಿಟ್ ಲಿಸ್ಟ್’ ನಲ್ಲಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

Advertisement

ಈ ಹಿನ್ನೆಲೆಯಲ್ಲಿ ಖಾದರ್ ಅವರಿಗೆ ಮಂಗಳೂರು ಪೊಲೀಸರು ಭದ್ರತೆ ನೀಡಿದ್ದಾರೆ. ಭದ್ರತೆಗಾಗಿ ಓರ್ವ ಗನ್ ಮೆನ್‌ನನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇವರ ಟಾರ್ಗೆಟ್ ಕೇವಲ ತನ್ವೀರ್ ಸೇಠ್ ಮಾತ್ರವಲ್ಲ. ರಾಜ್ಯದ ಪ್ರಮುಖ ಮುಸ್ಲಿಂ ಜಾತ್ಯಾತೀತ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಮಾಹಿತಿಯೂ ತನಿಖೆಯಿಂದ ಬಹಿರಂಗಗೊಂಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಪ್ರಮುಖ ರಾಜಕೀಯ ಮುಖಂಡರಿಗೆ ಭದ್ರತೆ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಯು.ಟಿ ಖಾದರ್ ಅವರಿಗೂ ಭದ್ರತೆ ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next