Advertisement

Karnataka: ಕೃಷಿ ಸಾಲ ಮಿತಿ ವಿಸ್ತರಣೆ ಯಾವಾಗ?

12:31 AM Sep 10, 2023 | Team Udayavani |

ಮಂಗಳೂರು: ಸಣ್ಣ, ಮಧ್ಯಮ ಕೃಷಿಕರಿಗೆ ಬಹಳ ಪ್ರಯೋಜನಕಾರಿಯಾಗುವ ಅಲ್ಪಾವಧಿ ಶೂನ್ಯ ಬಡ್ಡಿದರದ ಸಾಲದ ಮಿತಿಯನ್ನು 3ರಿಂದ 5 ಲಕ್ಷ ರೂ.ಗಳಿಗೆ ಏರಿಸುವ ರಾಜ್ಯ ಸರಕಾರದ ಭರವಸೆ ಇನ್ನೂ ಕಾರ್ಯಗತಗೊಂಡಿಲ್ಲ.

Advertisement

ಅಷ್ಟೇ ಅಲ್ಲ ಶೇ. 3ರ ಸುಲಭ ಬಡ್ಡಿದರದಲ್ಲಿ ಕೃಷಿ ಅಗತ್ಯಗಳಿಗಾಗಿ ಪಡೆಯುವ ಸಾಲದ ಮಿತಿಯನ್ನು 10ರಿಂದ 15 ಲಕ್ಷ ರೂ.ಗಳಿಗೆ ವಿಸ್ತರಿಸುವ ಘೋಷಣೆಯೂ ಹಾಗೆಯೇ ಉಳಿದುಕೊಂಡಿದೆ.
ಈ ಕೃಷಿ ಹಂಗಾಮಿನಿಂದಲೇ ಆಶ್ವಾಸನೆ ಜಾರಿಗೊಳಿಸ ಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿಕೆ ನೀಡಿ 2 ತಿಂಗಳುಗಳಾಗಿವೆ. ಲಭ್ಯಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಈ ಘೋಷಣೆಗಳಾ ಗಿದ್ದು, ಹಣಕಾಸು ಇಲಾಖೆಯ ಪರಿಶೀಲನೆಯಲ್ಲೇ ಇದೆ.

ಕೃಷಿಕರಿಗೆ ಅಲ್ಪಾವಧಿಯ ಕೃಷಿ ಉಪಯೋಗಕ್ಕೆ ಸಾಲವನ್ನು 3ರಿಂದ 5 ಲಕ್ಷ ರೂ.ವರೆಗೆ ವಿಸ್ತರಣೆ ಮಾಡಿದರೆ ಉತ್ತಮ. ಹಲವು ವರ್ಷಗಳಿಂದ ಈ ಮೊತ್ತ 3 ಲಕ್ಷ ರೂ.ಗಳಲ್ಲೇ ಇದೆ, ಬೆಲೆ ಏರಿಕೆಗೆ ಅನುಗುಣವಾಗಿ ಮೊತ್ತವನ್ನೂ ಪರಿಷ್ಕರಿಸಿ ನೀಡಿದರೆ ಉತ್ತಮ ಎಂದು ಕೃಷಿಕರೊಬ್ಬರು ಹೇಳುತ್ತಾರೆ. ಕೃಷಿ ಅಭಿವೃದ್ಧಿ ಮಾಡುವುದಕ್ಕೆ ಈ ಅಲ್ಪಾವಧಿ ಸಾಲದ ವಿಸ್ತರಣೆ ಹಾಗೂ 10ರಿಂದ 15 ಲಕ್ಷ ರೂ.ಗೆ  ಮಧ್ಯಮಾವಧಿ ಸಾಲ ವಿಸ್ತರಣೆ ಮಾಡುವುದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ.

ಇನ್ನೂ ಕೃಷಿ ಸಾಲ ಮಿತಿ ವಿಸ್ತರಣೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದಿಲ್ಲ, ಶೀಘ್ರ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿದ್ದೇವೆ.
-ಆಶಾ ಕೆ.ಎಂ., ಸಹಕಾರಿ ಇಲಾಖೆಯ

ಹೆಚ್ಚುವರಿ ರಿಜಿಸ್ಟ್ರಾರ್‌, ಸಾಲ ವಿಭಾಗ
ಶೇ. 3 ಹಾಗೂ ಶೂನ್ಯ ಬಡ್ಡಿದರದ ಸಾಲದ ಮಿತಿ ವಿಸ್ತರಣೆ ಕುರಿತು ಸರಕಾರದ ಆದೇಶ ಶೀಘ್ರ ಆಗಲಿದೆ. ಈಗಾಗಲೇ ಇದು ಅಂತಿಮ ಗೊಂಡಿದೆ, ಆದೇಶದ ಪ್ರತಿಯೂ ಲಭ್ಯವಾಗಲಿದೆ.
-ಕ್ಯಾ| ರಾಜೇಂದ್ರ ಕೆ., ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು

Advertisement

~ ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next