Advertisement

ಸೌರ ವಿದ್ಯುತ್‌ ಬಳಕೆ ಮಾಡಿ ವಿದ್ಯುತ್‌ ಉಳಿಸಿ

03:52 PM Jul 31, 2019 | Suhan S |

ಅಡಹಳ್ಳಿ: ಸಮೀಪದ ಕೊಕಟನೂರ ಗ್ರಾಮದ ಹೆಸ್ಕಾಂ ಶಾಖಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿದ್ಯುತ್‌ ಸುರಕ್ಷತೆ ಮತ್ತು ಉಳಿತಾಯ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.

Advertisement

ಐಗಳಿ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗಪ್ಪಾ ಬಿಳಗೀಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌರ ವಿದ್ಯುತ್‌ ಹಾಗೂ ಎಲ್ಇಡಿ ಬಲ್ಬ್ಗಳ ಬಳಕೆ ಮಾಡಿ ವಿದ್ಯುತ್‌ ಉಳಿತಾಯ ಮಾಡಬೇಕು ಎಂದರು.

ಜಿಪಂ ಸದಸ್ಯ ಸಿದ್ಧಪ್ಪಾ ಮುದಕಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಅಭಿಯಂತ ರಾಜು ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಕಾಂತು ಮಾದರ, ಶಾನೂರ ಕರಿಹಾಜಿ, ಮುತ್ತಪ್ಪಾ ಗಾಡಿವಡ್ಡರ, ರವಿ ದೊಡಮನಿ, ಪ್ರಕಾಶ ಹೆಗರೆ, ಹಣಮಂತ ಬಡಿಗೇರ, ಹಣಮಂತ ಮಾದರ ಸೇರಿದಂತೆ ಗ್ರಾಹಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next