Advertisement

ದತ್ತಮಾಲಾ ಅಭಿಯಾನಕ್ಕೆ ಅನುಮತಿ ನೀಡಲು ಆಗ್ರಹ

03:24 PM Oct 31, 2021 | Team Udayavani |

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ನ.11 ರಿಂದ 14ರ ವರೆಗೆ ಆಯೋಜಿಸಿರುವ ದತ್ತಾಮಾಲಾ ಅಭಿಯಾನಕ್ಕೆ ಜಿಲ್ಲಾಡಳಿತ ಅನುಮತಿ ನೀಡುವಂತೆ ಆಗ್ರಹಿಸಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿ ನೇತೃತ್ವದಲ್ಲಿ ಶನಿವಾರ ಜಿಲ್ಲಾ ಧಿಕಾರಿ ಕೆ.ಎನ್‌.ರಮೇಶ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ದತ್ತಾಮಾಲಾ ಅಭಿಯಾನದಲ್ಲಿ ಸಾಧು ಸಂತರು, ಶ್ರೀರಾಮಸೇನೆರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ಶ್ರೀ ಗುರು ದತ್ತಾತ್ರೇಯ ಹೋಮ, ಪೂಜೆ, ಸಾಧು ಸಂತರ ಸನ್ನಿ ಧಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ತಿಳಿಸಿದರು.

ದತ್ತಪೀಠದ ಗುಹಾಂತರ ದೇವಾಲಯದಲ್ಲಿ ಶಾಶ್ವತ ಹಿಂದೂ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆ ನಡೆಸಬೇಕು. ಗೋರಿಗಳನ್ನು ಸ್ಥಳಾಂತರಿಸಬೇಕು. ದತ್ತಪೀಠದಲ್ಲಿ ವಿಗ್ರಹವನ್ನು ಶೀಘ್ರವೇ ಪ್ರತಿಷ್ಠಾಪಿಸಬೇಕು. ದತ್ತಪೀಠಕ್ಕೆ ಶ್ರೀ ದತ್ತಾತ್ರೇಯ ಪೀಠ ಎಂದು ಘೋಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಮಹೇಶ್‌ ಮೇದಾರ್‌, ಜಿಲ್ಲಾಉಪಾಧ್ಯಕ್ಷ ದಿಲೀಪ್‌ ಶೆಟ್ಟಿ, ಪುನೀತ್‌, ಅಜಯ್‌ಗೌಡ, ಕೃಷ್ಣಕುಮಾರ್‌, ನವೀನಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next