Advertisement

ಕುಮಾರ ನಾಯಕ್‌ ವರದಿ ಶೀಘ್ರ ಜಾರಿಗೆ ಆಗ್ರಹ

02:19 PM Feb 11, 2020 | Suhan S |

ಮೊಳಕಾಲ್ಮೂರು: ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಹೆಚ್ಚುವರಿ ಮೂರನೇ ವೇತನ ಹಾಗೂ ಕುಮಾರ್‌ ನಾಯಕ್‌ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರಥಮ ಪಿಯುಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ತಾಲೂಕಿನ ರಾಂಪುರದ ಎಸ್‌.ಪಿ.ಎಸ್‌.ಆರ್‌ ಪದವಿಪೂರ್ವ ಕಾಲೇಜು ಉಪನ್ಯಾಸಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

Advertisement

ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಉನ್ನತ ವ್ಯಾಸಂಗವಾದ ಎಂ.ಫಿಲ್‌, ಪಿಎಚ್‌ಡಿ ಹಾಗೂ ನೆಟ್‌ ವ್ಯಾಸಂಗ ಮಾಡಿದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಪದೋನ್ನತಿ ನೀಡಿ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು. ಡಿಪಿಸಿಯಲ್ಲಿ ಆಯ್ಕೆಯಾದ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಪದೋನ್ನತಿ ನೀಡಬೇಕಾಗಿದೆ ಹಾಗೂ ಕಾಯಂ ಪ್ರಾಂಶುಪಾಲರಿಗೆ ಉಪನಿರ್ದೇಶಕರ ಹುದ್ದೆಗಳನ್ನು ತ್ವರಿತವಾಗಿ ನೀಡಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಿಯುಸಿ ಮೌಲ್ಯಮಾಪನವನ್ನು ಬಹಿಷ್ಕರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಲೇಜು ಪ್ರಾಂಶುಪಾಲ ಡಿ. ಮೋಹನ್‌, ಉಪನ್ಯಾಸಕರಾದ ಡಾ| ತಿಮ್ಮಣ್ಣ, ಕೆ.ಬೋರಯ್ಯ, ಜಿ. ಲಕ್ಷ್ಮೀ ಪತಿ, ಎಸ್. ಸಿದ್ದಣ್ಣ, ಟಿ. ವಸಂತ, ಅಶೋಕ ರೆಡ್ಡಿ, ರವಿಕುಮಾರ್‌, ಸುಂದರಮೂರ್ತಿ, ಓಂಕಾರಪ್ಪ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next