Advertisement

UPS ಯುಟರ್ನ್ ನೀತಿಯಲ್ಲ: ಕಾಂಗ್ರೆಸ್‌ಗೆ ವಿತ್ತ ಸಚಿವೆ ತಿರುಗೇಟು

10:15 PM Aug 27, 2024 | Team Udayavani |

ನವದೆಹಲಿ: ಏಕೀಕೃತ ಪಿಂಚಣಿ ವ್ಯವಸ್ಥೆ(ಯುಪಿಎಸ್‌) ಮೋದಿ “ಯುಟರ್ನ್’ ನೀತಿ ಎಂದು ಟೀಕಿಸಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ನಮ್ಮ ಯುಟರ್ನ್ ಸರ್ಕಾರವಲ್ಲ. ನಾವು ಮುಕ್ತರಾಗಿದ್ದೇವೆ ಮತ್ತು ಆಯ್ಕೆಗೆ ಮುಕ್ತವಾದ ಸರ್ಕಾರವನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Advertisement

ಯುಪಿಎಸ್‌ ಹಿಂಪಡೆಯುವ ನೀತಿಯಲ್ಲ. ಬದಲಿಗೆ, ಪ್ರಸಕ್ತ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಿದೆ ಎಂದಿದ್ದಾರೆ. ಬಿಜೆಪಿಯೇತರ ರಾಜ್ಯಗಳು ಯುಪಿಎಸ್‌ ಜಾರಿಗೆ ಹಿಂಜರಿಕೆ ತೋರುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡ ಅವರು, ಈಗಲ್ಲದಿದ್ದರೂ ಮುಂದೆ ಈ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ. ಎನ್‌ಪಿಎಸ್‌ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಯುಪಿಎಸ್‌ ಜಾರಿಗೆ ತರಲು ಹೊರಟಿದೆ.

Advertisement

Udayavani is now on Telegram. Click here to join our channel and stay updated with the latest news.

Next