Advertisement

ಮನೆಯಂಗಳದ ಗಿಡ ಕಿತ್ತ ತಪ್ಪಿಗೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟ ದುರುಳ!

09:08 AM Mar 21, 2021 | Team Udayavani |

ಬೇಗುಸರಾಯ್: ಆಡುತ್ತಿದ್ದ ವೇಳೆ ಮನೆತಯಂಗಳದಲ್ಲಿದ್ದ ಕಿಡವೊಂದನ್ನು ಕಿತ್ತ ತಪ್ಪಿಗೆ 12 ವರ್ಷದ ಬಾಲಕಿಯನ್ನು ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

Advertisement

ಬೇಗುಸರಾಯ್ ಜಿಲ್ಲೆಯ ಸಿವರಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಖಂದರ್ ಯಾದವ್ ಎಂಬಾತನೇ ಬಾಲಕಿಯನ್ನು ಸುಟ್ಟು ಹಾಕಿದ ಆರೋಪಿ.

12 ವರ್ಷದ ಬಾಲಕಿ ಸಿಖಂದರ್ ಯಾದವ್ ನ ಮನೆಯ ಎದುರು ಆಡುತ್ತಿದ್ದಳು. ಈ ವೇಳೆ ಅಕಸ್ಮಾತ್ ಆಗಿ ಗಿಡವೊಂದನ್ನು ಕಿತ್ತಳು. ಇದನ್ನು ಗಮನಿಸಿದ ಸಿಖಂದರ್, ಆತನ ಪತ್ನಿ ಮತ್ತು ಆತನ ಮಗಳು ಬಾಲಕಿಗೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ:ತರಗತಿಗೆ ರಜೆ? : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ತಜ್ಞರ ಶಿಫಾರಸು

ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬಂಗಾಲಿಗರ ಕನಸೇ ಬಂದ್‌! : ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ

Advertisement

Udayavani is now on Telegram. Click here to join our channel and stay updated with the latest news.

Next