Advertisement

ಉಪ್ಪುಂದ: ಐದೇ ನಿಮಿಷದಲ್ಲಿ ಮುಗಿದ ಮದುವೆ!

10:26 AM Apr 01, 2020 | sudhir |

ಉಪ್ಪುಂದ: ದೇಶಾದ್ಯಂತ ಲಾಕ್‌ಡೌನ್‌ ಇರುವುದರಿಂದ ಮೊದಲೇ
ನಿಗದಿಯಾಗಿದ್ದ ಮದುವೆ ಸಮಾರಂಭವೊಂದನ್ನು ಕೇವಲ ಐದೇ ನಿಮಿಷದಲ್ಲಿ ಮುಗಿಸಲಾಯಿತು. ಕಿರಿಮಂಜೇಶ್ವರ ಗ್ರಾಮದ ನಾಗೂರು ನಿವಾಸಿ ನಾಗಲಕ್ಷ್ಮೀ
ಮತ್ತು ಬಿಜೂರು ಬೆಸ್ಕೂರು ಮನೆ ನಿವಾಸಿ ದಿನೇಶ ಅವರ ವಿವಾಹ ಮಾ. 30ರಂದು ಇಲ್ಲಿನ ಶಾಲೆ ಬಾಗಿಲಿನ ಸಭಾಭವನವೊಂದರಲ್ಲಿ ನಡೆಯಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣ ಗೌಜಿಯಿಂದ ಮದುವೆ ಅಸಾಧ್ಯವಾಗಿತ್ತು.

Advertisement

ಆದ್ದರಿಂದ ಹಿರಿಯರ ಅಪೇಕ್ಷೆಯಂತೆ ಅದೇ ಮುಹೂರ್ತದಲ್ಲಿ ಬಿಜೂರು ಶ್ರೀ ಅರೆಕಲ್ಲು ಮಹಾಲಿಂಗೇಶ್ವರ ದೇಗುಲದಲ್ಲಿ ವಧೂವರರ ಹೆತ್ತವರ ಸಮ್ಮುಖದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಯಾವುದೇ ಆಡಂಬರವಿಲ್ಲದೆ, ಮಂತ್ರ, ಮಂಗಳವಾದ್ಯಗಳೂ ಇಲ್ಲದೆ ಅತ್ಯಂತ ಸರಳವಾಗಿ ತಾಳಿ ಕಟ್ಟುವ ಮೂಲಕ 5 ನಿಮಿಷದಲ್ಲಿ ಮದುವೆ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next