Advertisement

ಉಪ್ಪುಂದ ಪೇಟೆ: ಕಸದ ರಾಶಿಗೆ ಮುಕ್ತಿ

03:35 AM Jun 29, 2017 | Team Udayavani |

ಮರವಂತೆ(ಉಪ್ಪುಂದ): ಉಪ್ಪುಂದ ಗ್ರಾಮ ಪಂ.ವ್ಯಾಪ್ತಿಯ ಪೇಟೆಯ ಸಮೀಪದಲ್ಲಿನ ಕಸದ ತೋಟಿಯ ತ್ಯಾಜ್ಯದ ಸುತ್ತಲು ನೀರು ತುಂಬಿಕೊಂಡ ಪರಿಣಾಮ ಪೇಟೆಯ ಸುತ್ತಮುತ್ತಲು ಕೆಟ್ಟ ವಾಸನೆ ಹರಡಿರುವ ಕುರಿತು ಉದಯವಾಣಿ ಜನಪರ ಕಾಳಜಿ ವಹಿಸಿ ದುರ್ವಾಸನೆ ಬೀರುತ್ತಿದೆ ಉಪ್ಪುಂದ ಪೇಟೆ ಶೀರ್ಷಿಕೆ ಅಡಿಯಲ್ಲಿ ಜೂ.15ರಂದು ಚಿತ್ರ ಸಹಿತ ವಿಸ್ತೃತ ವರದಿ ಪ್ರಕಟಿಸಿದ ಪರಿಣಾಮ ಕಸವನ್ನು ತಗೆಯುವುದರ ಮೂಲಕ ಸಮಸ್ಯೆಗೆ ಸ್ಪಂದಿಸಿದ್ದಾರೆ.

Advertisement

ಇಲ್ಲಿನ ರಾ.ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆಯ ಎಂಬ್ಯಾಕ್‌ ಮೆಂಟ್‌ ಕಾಮಗಾರಿ ನಡೆಸುತ್ತಿದ್ದು ಸರ್ವಿಸ್‌ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡದಿರುವುದರಿಂದ ಮಳೆ ನೀರು ಹರಿದು ಹೋಗದೇ ಕಸದರಾಶಿಯ ತೊಟ್ಟಿಯ ಬಳಿ ನೀರು ನಿಂತುಕೊಂಡಿದ್ದು ಇದರಲ್ಲಿ ತ್ಯಾಜ್ಯಗಳು ಕೊಳೆತು ಪರಿಸರದ ಸುತ್ತಮುತ್ತಲು ಕೆಟ್ಟ ವಾಸನೆ ಹರಡಿತ್ತು.

ತ್ಯಾಜ್ಯಗಳ ಕೊಳೆತದ ಪರಿಣಾಮ ಪೇಟೆಯಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೆ  ಸ್ಥಳೀಯರಲ್ಲಿ ಸಾಂಕ್ರಮಿಕ ರೋಗ ಹರಡುವ  ಭೀತಿ ಎದುರಾಗಿತು. ಇಲ್ಲಿ ತ್ಯಾಜ್ಯಗಳ ನಿರ್ವಹಣೆ ಸರಿಯಾಗಿ ನಿರ್ವಹಿಸದೇ ಇರುವುದರಿಂದ ದನಕರುಗಳು ತ್ಯಾಜ್ಯಗಳನ್ನು ತಿನ್ನುತ್ತಿರುವುದು ಕಂಡುಬಂದಿತು.
ಇವುಗಳ ಬಗ್ಗೆ ಉದಯವಾಣಿಯಲ್ಲಿ ವರದಿ ಪ್ರಕಟವಾದ ಬಳಿಕ ಸಮಸ್ಯೆಯ ಗಂಭೀರತೆಯನ್ನು ಅರಿತ ಸಂಬಂಧಪಟ್ಟ ಇಲಾಖೆ ತ್ಯಾಜ್ಯಗಳನ್ನು ಪೂರ್ತಿಯಾಗಿ ತೆಗೆಯುವುದರ ಮೂಲಕ ಸಾರ್ವಜನಿಕರಿಗಾಗುತ್ತಿರುವ  ಸಮಸ್ಯೆಗೆ ಮುಕ್ತಿ ದೊರಕಿವೆ.

ವರದಿಗೆ ಶ್ಲಾಘನೆ
ಗಬ್ಬು ನಾರುತ್ತಿರುವ ನಡುವೆ ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸಬೇಕಾದ ಅನಿವಾರ್ಯತೆ ಕುರಿತು ಉದಯವಾಣಿಯಲ್ಲಿ  ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಸ್ವತ್ಛತೆ ಕ್ರಮಕೈಗೊಂಡಿತ್ತು. ಉದಯವಾಣಿ ಜನಪರ ಕಾಳಜಿ ವರದಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next