Advertisement

Uppinangady ಯುವತಿ ಸ್ನಾನ ಮಾಡುತ್ತಿದ್ದಾಗ ಇಣುಕಿದವ ಪೊಲೀಸ್‌ ವಶಕ್ಕೆ

12:14 AM Jul 23, 2024 | Team Udayavani |

ಉಪ್ಪಿನಂಗಡಿ: ಪೆರಿಯಡ್ಕದಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಲೆತ್ನಿಸಿದ ಪೆರಿಯಡ್ಕದ ಅಬ್ದುಲ್‌ ರಹಿಮಾನ್‌ (39)ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.

Advertisement

ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯ ಬಾಗಿಲನ್ನು ಸರಿಸಲು ಯತ್ನಿಸಿದಾಗ ಉಂಟಾದ ಶಬ್ದದಿಂದ ಸಂಶಯಗೊಂಡ ಯುವತಿಯು ತಾಯಿಗೆ ತಿಳಿಸಿದಳು. ಆಗ ಅಬ್ದುಲ್‌ ರಹಿಮಾನ್‌ ಓಡುತ್ತಿರುವುದು ಕಂಡು ಬಂತು.

ಸಹಾಯಕ್ಕೆ ಬರುವಂತೆ ನಟಿಸಿದ!: ಈ ನಡುವೆ ತನಗೆ ಏನೂ ಗೊತ್ತಿಲ್ಲದವನಂತೆ ವರ್ತಿಸಿದ ಆತ, ಯುವತಿಯ ತಾಯಿ ಬೊಬ್ಬೆ ಹಾಕಿದಾಗ, ಸಹಾಯಕ್ಕೆ ಬಂದನಂತೆ ನಡೆಸಿ ಏನಾಯಿತಕ್ಕ ಎಂದು ಕೇಳಿದ್ದ. ಆದರೆ ಈತನ ಬಗ್ಗೆ ಈ ಮೊದಲೇ ಸಂಶಯ ಇದ್ದುದರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next