Advertisement

ಉಪ್ಪಿನಂಗಡಿ: ಅನಧಿಕೃತ ಪಂಪ್‌ಗ್ಳ ಮೂಲಕ ನದಿ ನೀರು ಬಳಕೆ ಪತ್ತೆ

08:05 PM May 22, 2019 | mahesh |

ಉಪ್ಪಿನಂಗಡಿ: ನದಿಗಳ ಅಕ್ಕಪಕ್ಕದ ರೈತರು ನದಿ ನೀರಿಗೆ ಪಂಪು ಅಳವಡಿಸಿ ನೀರು ಬಳಸುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ.

Advertisement

ಇಲ್ಲಿ ನೇತ್ರಾವತಿ-ಕುಮಾರಧಾರಾ ನದಿಗಳು ಹರಿಯುತ್ತಿದ್ದು, ನದಿ ದಡದಲ್ಲಿರುವ ಅದೆಷ್ಟೋ ಗ್ರಾಮಸ್ಥರು ಅಧಿಕೃತದವರ ಜತೆಗೆ ಅನಧಿಕೃತವಾಗಿ ಪಂಪು ಅಳವಡಿಸಿ ನೀರು ಎತ್ತುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೀರಿನ ಬರ ಎದುರಾಗಿದ್ದಾಗ ಆಗಿನ ಜಿಲ್ಲಾಧಿಕಾರಿಗಳು ತತ್‌ಕ್ಷಣ ಅನಧಿಕೃತ ಪಂಪುಗಳನ್ನು ಕಿತ್ತೆಸೆಯುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದ ಬೆನ್ನಲ್ಲೇ ಪಂಪುಗಳು ನಾಪತ್ತೆಯಾಗಿದ್ದವು.

ರೈತಾಪಿ ವರ್ಗದ ಜನರ ಕೃಷಿ ಜೀವನಾಡಿ ಯಾಗಿದ್ದರೂ ವಾರದ 3 ದಿನ ನೀರು ಪೂರೈಕೆಯಾದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಮೆಸ್ಕಾಂನ ಉಚಿತ ವಿದ್ಯುತ್‌ನಿಂದ ನದಿ ನೀರನ್ನು ಹಾಯಿಸಿ ಕೊಂಡು ತೊಂದರೆ ಉಂಟು ಮಾಡುವುದು ಸರಿಯಲ್ಲ ಎಂದು ಜಲ ಹಾಗೂ ಪರಿಸರ ಜಾಗೃತಿ ಸಂಘದ ಅಧ್ಯಕ್ಷ ಡಾ| ಕೈಲಾರ್‌ ರಾಜಗೋಪಾಲ ಭಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next