Advertisement

Uppinangady ಕಡೆಂಬಿಲ ಬಳಿ ಬೈಕ್ ಇಟ್ಟು ಸವಾರ ನಾಪತ್ತೆ; ದೂರು ದಾಖಲು

12:09 AM Aug 16, 2023 | Team Udayavani |

ಉಪ್ಪಿನಂಗಡಿ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಉದನೆ ಸಮೀಪದ ಕಡೆಂಬಿಲ ಎಂಬಲ್ಲಿ ಬೈಕೊಂದು ಅನಾಥವಾಗಿದ್ದು, ಬೈಕ್‌ ಸವಾರ ಲೋಕೇಶ್‌ (43) ಅವರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಊರ್ನಡ್ಕ ಮನೆ ನಿವಾಸಿ ಲೋಕೇಶ್‌ ಮನೆಗೆ ಅಗತ್ಯ ಸಾಮಾನುಗಳನ್ನು ತರುತ್ತೇನೆಂದು ಸೋಮವಾರ ಸಾಯಂಕಾಲ ಬೈಕ್‌ನಲ್ಲಿ ಮನೆಯಿಂದ ಹೋದವರು ಉದನೆ ಪೇಟೆಗೆ ಹೋಗಿ ಕಡೆಂಬಿಲ ಎಂಬಲ್ಲಿ ಬೈಕ್‌ ನಿಲ್ಲಿಸಿ ನಾಪತ್ತೆಯಾಗಿರುತ್ತಾರೆ. ರಾತ್ರಿಯಾದರೂ ಲೋಕೇಶ್‌ ಮನೆಗೆ ಬಾರದೇ ಇದ್ದ ಕಾರಣಕ್ಕೆ ಕಡೆಂಬಿಲ ಎಂಬಲ್ಲಿನ ನದಿ ಪರಿಸರದಲ್ಲಿ ಹುಡುಕಾಟ ನಡೆಸಿದರಾದರೂ ಪತ್ತೆಯಾಗಲಿಲ್ಲವೆಂದು ಅವರ ಸಹೋದರ ರಾಮಚಂದ್ರ ಗೌಡ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಲೋಕೇಶ್‌ ವಿವಾಹಿತರಾಗಿದ್ದು, ಪತ್ನಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next