Advertisement

Uppinangady: ಹೆದ್ದಾರಿ ತಡೆಗೋಡೆ ಕುಸಿತ

11:41 PM May 21, 2024 | Team Udayavani |

ಉಪ್ಪಿನಂಗಡಿ: ಪುತ್ತೂರು- ಉಪ್ಪಿನಂಗಡಿ ನಡುವಣದ ರಸ್ತೆಯ ವಿಸ್ತರಣೆ ಬಿರುಸಿನಿಂದ ನಡೆಯುತ್ತಿದ್ದು, 34ನೇ ನೆಕ್ಕಿಲಾಡಿ-ಬೊಳುವಾರು ರಾಜ್ಯ ಹೆದ್ದಾರಿಯ ಆದರ್ಶನಗರದಲ್ಲಿ ಭಜನ ಮಂದಿರಕ್ಕೆ ಹೋಗುವ ರಸ್ತೆಯ ಪಾರ್ಶ್ವದಲ್ಲಿ ನಿರ್ಮಿಸಿರುವ 15 ಅಡಿ ಎತ್ತರದ ಕಾಂಕ್ರೀಟ್‌ ತಡೆಗೋಡೆ ಮಂಗಳವಾರ ಕುಸಿದು ಬಿದ್ದಿದೆ.

Advertisement

ತಡೆಗೋಡೆ ಬಾಳಿಕೆಯ ಬಗ್ಗೆ ಸ್ಥಳೀಯರಿಗೆ ನಿರ್ಮಾಣ ಹಂತದಲ್ಲೇ ಸಂಶಯ ಬಂದಿತ್ತಾದರೂ ಎಂಜಿನಿಯರ್‌ಗಳ ಮುಂದೆ ಹೇಳಲಾಗದೆ ಮೌನವಾಗಿದ್ದರು. ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ತಡೆಗೋಡೆಯ ಅರ್ಧ ಭಾಗ ಧರಾಶಾಯಿಯಾಗಿದೆ.

ಸ್ಥಳಕ್ಕೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಯಿಸಿ ತರಾಟೆಗೆ ತೆಗೆದುಕೊಂಡರಲ್ಲದೆ, ಕಾಮಗಾರಿಯನ್ನು ಗುಣಮಟ್ಟ ದೊಂದಿಗೆ ನಡೆಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next