Advertisement

ಕಳ್ಳರು ಕದ್ದೊಯ್ದರು; ಇವರು ದಾನವಾಗಿ ಕೊಟ್ಟರು!

10:58 PM Jun 09, 2024 | Team Udayavani |

ಉಪ್ಪಿನಂಗಡಿ: ಪಿಲಿಗೂಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬಿಸಿಯೂಟದ ಮಿಕ್ಸಿ, ಗ್ಯಾಸ್‌ ಸಿಲಿಂಡರ್‌ಗಳನ್ನು ಇತ್ತೀಚೆಗೆ ಕಳ್ಳರು ಕಳ್ಳತನ ಮಾಡಿದ್ದು, ಶಾಲೆಯಲ್ಲಿ ಬಿಸಿಯೂಟ ತಯಾರಿಗೆ ಸಮಸ್ಯೆಯಾಗಿತ್ತು. ಇದನ್ನು ತಿಳಿದ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಹಾಗೂ ಉದ್ಯಮಿ ಮೋಹನ್‌ ಕುಮಾರ್‌ ಅವರು ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್‌ ಸಿಲಿಂಡರ್‌ ನೀಡಿ ಮಕ್ಕಳ ಬಿಸಿಯೂಟ ಅಬಾಧಿತವಾಗಿ ನಡೆಯುವಂತೆ ಸಹಕರಿಸಿದ್ದಾರೆ.

Advertisement

ಜೂ.5ರ ರಾತ್ರಿ ಕಳ್ಳತನ ನಡೆದಿದ್ದು, ಶಾಲೆಯ ಸಮಸ್ಯೆಯನ್ನು ಅರಿತ ಉದ್ಯಮಿ ಮೋಹನ್‌ ಕುಮಾರ್‌ ಅವರು ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್‌ ಸಿಲಿಂಡರ್‌ ನೀಡುವ ಮನಸ್ಸು ಮಾಡಿದರು. ಅದರಂತೆ ಶಾಲೆಗೆ ತೆರಳಿ ಎಸ್‌ಡಿಎಂಸಿ ಅಧ್ಯಕ್ಷರ, ಶಿಕ್ಷಕರ ಸಮ್ಮುಖದಲ್ಲಿ ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್‌ ಸಿಲಿಂಡರ್‌ ಹಸ್ತಾಂತರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪ್ಲೇವಿಯ ಡಿ’ಸೋಜಾ, ಶಿಕ್ಷಕಿಯರಾದ ಚಂದ್ರಾ ಕೆ, ಶಿಲ್ಪಾ, ಉಷಾ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಇಸ್ಮಾಯಿಲ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್‌, ಎಸ್‌.ಡಿ.ಎಂ.ಸಿ ಸದಸ್ಯರಾದ ಬಾಲಕೃಷ್ಣ, ವನಿತಾ ಹಾಗೂ ಪೋಷಕರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next