Advertisement

Uppinangady ವಿದ್ಯುತ್‌ ತಂತಿ ಸ್ಪರ್ಶಿಸಿ ಸಾವು

11:25 PM Oct 24, 2023 | Team Udayavani |

ಉಪ್ಪಿನಂಗಡಿ: ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿದ ವ್ಯಕ್ತಿಯೋರ್ವರು ವಿದ್ಯುತ್‌ ಪ್ರವಹಿಸಿ ಸಾವನ್ನಪ್ಪಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಅ. 23ರಂದು ವರದಿಯಾಗಿದೆ.

Advertisement

ಬೆಳ್ತಂಗಡಿ ತಾ| ಕರಾಯ ಗ್ರಾಮದ ಸಗುಣ ಮೃತರು. ಅವರು ಅ. 23ರಂದು ಪೆದಮಲೆಯ ಜಯಂತ ಕುಮಾರ್‌ ಅವರ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದಾಗ ಪೊದೆಗಳ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯೊಂದನ್ನು ಸ್ಪರ್ಶಿಸಿದ್ದಾರೆ.

ವಿದ್ಯುತ್‌ ಪ್ರವಹಿಸಿ ಅವರು ಅಲ್ಲೇ ಬಿದ್ದಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಗುಣ ಅವರ ಪತ್ನಿ ಅಂಗಾರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಸಂಶಯಾಸ್ಪದ ಸಾವು: ದೂರು
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರೀಕರಣದ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್‌ ಸಂಸ್ಥೆಯಲ್ಲಿ ಸೈಟ್‌ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ಅನೂಪ್‌(47) ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ಪೆರ್ನೆ ಎಂಬಲ್ಲಿ ನಡೆದಿದೆ.

ಮಂಗಳವಾರದಂದು ವಾಹನ ಚಾಲಕ ಅನೂಪ್‌ ಅವರಿಗೆ ಫೋನ್‌ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಬಳಿಕ ಚಾಲಕ ಮನೆಗೆ ಹೋದಾಗ ಒಳಗಿನಿಂದ ಚಿಲಕ ಹಾಕಿಕೊಂಡಿದ್ದು, ಕಿಟಕಿಯಿಂದ ನೋಡಿದಾಗ ಅವರ ಮೃತದೇಹ ಕಂಡು ಬಂದಿದೆ. ಸಂಸ್ಥೆಯ ಚಾಲಕ ರಮೇಶ್‌ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next