Advertisement

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

01:13 AM Oct 02, 2024 | Team Udayavani |

ಉಪ್ಪಿನಂಗಡಿ: ಕಾರು ಢಿಕ್ಕಿಯಾಗಿ 4ನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕೊಕ್ಕಡದ ಮಲ್ಲಿಗೆ ಮಜಲು ಎನ್ನುವಲ್ಲಿ ಮಂಗಳವಾರ ನಡೆದಿದೆ.

Advertisement

ಇಲ್ಲಿನ ನಿವಾಸಿ ಅಬ್ದುಲ್‌ ಹಮೀದ್‌ ಅವರ ಪುತ್ರ ನವಾಫ್ ಇಸ್ಮಾಯಿಲ್‌ (9) ಮೃತ ಬಾಲಕ. ಈತ ಆತೂರಿನ ಆಯಿಷಾ ಸ್ಕೂಲ್‌ನ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆ ಬಿಟ್ಟು ಮನೆಗೆ ಬಂದಿದ್ದ ಈತ ತನ್ನ ಮನೆಯ ಸಿಟೌಟ್‌ನಲ್ಲಿ ಕುಳಿತು ಚಹಾ ಕುಡಿಯುತ್ತಿದ್ದ. ಈ ಸಂದರ್ಭ ಈತನ ಸಂಬಂಧಿಕರು ಅಂಗಳದಲ್ಲಿ ಕಾರು ಚಾಲನೆ ಮಾಡಿದ್ದು, ಕಾರಿನ ಕ್ಲಚ್‌ ಜಾಮ್‌ ಆಗಿ ಕಾರು ಬಾಲಕನಿಗೆ ಗುದ್ದಿದೆ.

ಇದರಿಂದಾಗಿ ಈತ ಗಂಭೀರವಾಗಿ ಗಾಯಗೊಂಡಿದ್ದು, ತತ್‌ಕ್ಷಣವೇ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ.

ಕಾರು ಅಪಘಾತದ ಸಂದರ್ಭ ಕಾರಿನಲ್ಲಿ ಇನ್ನೋರ್ವ ಬಾಲಕನೂ ಇದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next