Advertisement

ಉಪ್ಪಿನಂಗಡಿ ವಾಣಿಜ್ಯ ಮಳಿಗೆ ನಿರ್ಮಾಣ: ಸ್ಥಳ ಪರಿಶೀಲನೆ

04:04 PM Feb 23, 2017 | Team Udayavani |

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್‌ ನಿಲ್ದಾಣದ ಬಳಿಯ ಹಳೇ ವಾಣಿಜ್ಯ ಕಟ್ಟಡವನ್ನು ಕೆಡವಿ ನಾಲ್ಕು ಮಹಡಿಯ ಹೊಸ ವಾಣಿಜ್ಯ ಮಳಿಗೆ ನಿರ್ಮಿಸಲು ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಆಡಳಿತ ಸ್ಥಳ ಪರಿಶೀಲನೆ ನಡೆಸಿತು.

Advertisement

ಈಗಾಗಲೇ ಇರುವ ಹಳೇ ಕಟ್ಟಡ ಅವಧಿ ಪೂರ್ಣಗೊಂಡಿದ್ದು, ಹೊಸದಾಗಿ ನಿರ್ಮಿಸಲಾಗುವ ನಾಲ್ಕು ಮಹಡಿಗಳ ಕಟ್ಟಡದಲ್ಲಿ 30 ಅಂಗಡಿ ಕೊಠಡಿಗಳು, ಪ್ರವಾಸಿಗರಿಗೆ ವಸತಿ ಗೃಹ, ಸಭಾಂಗಣ, ಮೊದಲಾದ ಮೂಲ ಆವಶ್ಯಕತೆಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವನ್ನು ಪಂಚಾಯತ್‌ ಆಡಳಿತ ತನ್ನ ಸ್ವಂತ ಸಂಪನ್ಮೂಲಗಳಿಂದಲೇ ಹೊಂದಿಸಿ ಕೊಳ್ಳುವ ಭರವಸೆ ವ್ಯಕ್ತಪಡಿಸಿದೆ.

ಸ್ಥಳ ಪರಿಶೀಲನಾ ಸಮಯದಲ್ಲಿ ಪಂಚಾಯತ್‌ ಅಧ್ಯಕ್ಷ  ಕೆ. ಅಬ್ದುಲ್‌ ರಹಿಮಾನ್‌, ಸದಸ್ಯರಾದ ಸುರೇಶ್‌ ಅತ್ರಮಜಲು, ಸುನಿಲ್‌ ಕುಮಾರ್‌ ದಡ್ಡು, ಚಂದ್ರಶೇಖರ್‌  ಮಡಿವಾಳ, ಮಹಮ್ಮದ್‌ ತೌಷಿಫ್, ರಾಜ್‌ ಗೋಪಾಲ ಹೆಗ್ಡೆ, ಯು.ಕೆ. ಇಬ್ರಾಹಿಂ, ಪಿಡಿಒ ಅಬ್ದುಲ್ಲಾ ಅಸಫ್, ಕಾರ್ಯದರ್ಶಿ  ರೋಹಿತ್‌ ಮೊದಲಾದವರು ಉಪಸ್ಥಿತರಿದ್ದರು.

ಉತ್ತಮ ನಡೆ
ಉಪ್ಪಿನಂಗಡಿ ಪಟ್ಟಣವು ಪುಣ್ಯ ತೀರ್ಥ ಕ್ಷೇತ್ರವಾಗಿದೆ. ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿಗೆ ಬರುವ ಯಾತ್ರಾರ್ಥಿಕರಿಗೆ ಉತ್ತಮ ಸೌಲಭ್ಯ ದೊರೆಯುವಂತಾಗಲು ದೂರಗಾಮಿ ಚಿಂತನೆ ಬೇಕು. ಇದಕ್ಕೆ ಬಹು ಉಪಯೋಗಿ ಕಟ್ಟಡ ನಿರ್ಮಿಸಲು ಪಂಚಾಯತ್‌ ಮುಂದಾಗಿದೆ. ಪಂಚಾಯತ್‌ನ ಎಲ್ಲ ಸದಸ್ಯರು ಪಕ್ಷ ಬೇಧ ಮರೆತು ಬೆಂಬಲ ಸೂಚಿಸುತ್ತಿದ್ದಾರೆ. ಇದು ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂಬುದು ಗ್ರಾಮಸ್ಥರು ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next