Advertisement

ಉತ್ತರ ಪ್ರದೇಶ : ಹೆಚ್ಚಿನ ವರದಕ್ಷಿಣೆಗಾಗಿ ನವ ವಿವಾಹಿತೆಯ ಕೊಲೆ

06:49 AM Feb 02, 2019 | udayavani editorial |

ಮುಜಫ‌ರನಗರ, ಉತ್ತರ ಪ್ರದೇಶ : ಶಾಮ್ಲಿ ಜಿಲ್ಲೆಯ ಗಢೀ ಪುಖ್‌ತಾ ಪೊಲೀಸ್‌ ಠಾಣೆ ವ್ಯಾಪ್ತಿಯ ಪಕ್ಕೀ ಗಢೀ ಗ್ರಾಮದಲ್ಲಿ, ಹೆಚ್ಚಿನ ವರದಕ್ಷಿಣೆಗಾಗಿ ನವ ವಿವಾಹಿತೆಯನ್ನು ಆಕೆಯ ಗಂಡ ಮತ್ತು ಮನೆಯವರು ಸೇರಿಕೊಂಡು ಕೊಂದಿರುವ ಘಟನೆ ವರದಿಯಾಗಿದೆ. 

Advertisement

ಮೃತ ನವ ವಿವಾಹಿತೆ ಸನಾ ಖಾನ್‌ (28) ಒಂಬತ್ತು ತಿಂಗಳ ಹಿಂದೆ ಅರಿಝ್ ಹಸನ್‌ ಎಂಬಾತನನ್ನು ಮದುವೆಯಾಗಿದ್ದಳು. ಆಕೆಯನ್ನು ಕೊಂದಿರುವ ಆರೋಪದ ಮೇಲೆ ಪೊಲೀಸರು ಇದೀಗ ತಲೆ ಮರೆಸಿಕೊಂಡಿರುವ ಆಕೆಯ ಪತಿ ಮತ್ತು ಆತನ ಐವರು ಸಂಬಂಧಿಗಳ ವಿರುದ್ಧ ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಮೃತ ಮಹಿಳೆಯ ಸಹೋದರ ಹೇಹಾದ್‌ ಖಾನ್‌ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಆಕೆಯ ಗಂಡ ಮತ್ತು ಮನೆಯವರು 10 ಲಕ್ಷ ರೂ. ವರದಕ್ಷಿಣೆಗಾಗಿ ಕಳೆದ ಹಲವು ತಿಂಗಳಿಂದ ಸನಾಳನ್ನು ದೈಹಿತವಾಗಿ ಮಾನಸಿಕವಾಗಿ ಪೀಡಿಸುತ್ತಿದ್ದರು.

ಸನಾಳ ಸಾವಿನಿಂದ ಉದ್ರಿಕ್ತತೆ ತಲೆದೋರಿದ್ದು ಸಿಟ್ಟಿಗೆದ್ದಿರುವ ಗ್ರಾಮಸ್ಥರು ನವಾಲ್ತಿ ಚೌಕ್‌ ಸಮೀಪ ರಸ್ತೆ ತಡೆ ನಡೆಸಿ ಕೊಲೆಗಾರರ ತ್ವರಿತ ಬಂಧನವನ್ನು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next