ಮುಜಫರನಗರ : ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣಕ್ಕೆ ಸಿಟ್ಟಿಗೆದ್ದ ಮುಸ್ಲಿಂ ಪತಿಯೋರ್ವ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಮನೆಯ ಟೆರೇಸ್ನಿಂದ ಆಕೆಯನ್ನು ಕೆಳ ದೂಡಿದ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿರವುದಾಗಿ ಪೊಲೀಸರು ತಿಳಿಸಿದ್ದಾರೆ.
ಟೆರೇಸ್ನಿಂದ ಕೆಳ ದೂಡಲ್ಪಟ್ಟ ಮಹಿಳೆಗೆ ತೀವ್ರ ಗಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ; ಆಕೆಯ ಸ್ಥಿತಿ ಗಂಭೀರವಿದೆ ಎಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಠಾಣಾಧಿಕಾರಿ ತಿಳಿಸಿದ್ದಾರೆ. ಹಾಪುರ್ ಜಿಲ್ಲೆಯ ಗಢಮುಕ್ತೇಶ್ವರ ದಲ್ಲಿ ಈ ಘಟನೆ ಜನವರಿ 15ರಂದು ನಡೆದಿದ್ದು ತಡವಾಗಿ ವರದಿಯಾಗಿದೆ.
ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯ ಗಂಡ ಶಾಮ್ ಮೊಹಮ್ಮದ್ ಘಟನೆಯ ಬಳಿಕ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.ಪೊಲೀಸರು ಮಹಿಳೆಯ ಪತಿ ಮಾತ್ರವಲ್ಲದೆ ಆತ್ತೆ ಮಾವನ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯ ಅಧಧಿಕಾರಿ ಮೀನಾಕ್ಷಿ ಶರ್ಮಾ ತಿಳಿಸಿದ್ದಾರೆ.