Advertisement

ವಿದ್ಯಾರ್ಥಿಯನ್ನು ನೇತಾಡಿಸಿದ ಹೆಡ್‌ಮಾಸ್ಟರ್‌ ಬಂಧನ

12:19 AM Oct 30, 2021 | Team Udayavani |

ಲಕ್ನೋ: ಶಾಲೆಯಲ್ಲಿ ಸಹಪಾಠಿಗೆ ಕಚ್ಚಿದ್ದ ಎಂಬ ಕಾರಣಕ್ಕಾಗಿ 2 ವರ್ಷದ ವಿದ್ಯಾರ್ಥಿ ಸೋನು ಯಾದವ್‌ ಎಂಬ ವಿದ್ಯಾರ್ಥಿಯನ್ನು ಮುಖ್ಯೋಪಾಧ್ಯಾಯರು ಒಂದು ಕಾಲಿನಲ್ಲಿ ಹಿಡಿದು ನೇತಾಡಿಸಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್‌ ಆಗಿದೆ. ಜತೆಗೆ ಅವರನ್ನು ಬಂಧಿಸಲಾಗಿದ್ದು, ಅವರನ್ನು ಮನೋಜ್‌ ವಿಶ್ವಕರ್ಮ ಎಂದು ಗುರುತಿಸಲಾಗಿದೆ.

ಮನೋಜ್‌ ಅವರು ವಿದ್ಯಾರ್ಥಿಯನ್ನು ಶಾಲಾ ಕಟ್ಟಡ ಕೊನೆಯ ಮಹಡಿಯಲ್ಲಿ ಒಂದು ಕಾಲನ್ನು ಹಿಡಿದು ತಲೆಕೆಳಗಾಗಿ ನೇತಾಡಿಸಿ ಅಪರಾಧಕ್ಕಾಗಿ ಕ್ಷಮೆ ಕೇಳಬೇಕು. ಇಲ್ಲದರೆ ಕೆಳಕ್ಕೆ ಬೀಳಿಸುತ್ತೇನೆ ಎಂದು ಬೆದರಿಸಿದ್ದಾರೆ.

ವಿಚಿತ್ರವೆಂದರೆ, ವಿದ್ಯಾರ್ಥಿಯ ತಂದೆ ಪ್ರತಿಕ್ರಿಯೆ ನೀಡಿ, ಮುಖ್ಯೋಪಾಧ್ಯಾಯರು ನಡೆಸಿದ ಕೃತ್ಯವನ್ನು ಖಂಡಿಸಿದ್ದರೂ, ಅವರು ಅದನ್ನು ಪ್ರೀತಿಯಿಂದ ಎಸಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:ಅಪ್ಪು ಅಂತಿಮ ನಮನ : ಕಂಠೀರವ ಸ್ಟೇಡಿಯಂ ಬಳಿ ನೂಕು ನುಗ್ಗಲು

Advertisement
Advertisement

Udayavani is now on Telegram. Click here to join our channel and stay updated with the latest news.

Next