Advertisement

ತ್ರಿಬಲ್‌ ರೈಡ್‌ಗೆ ದಂಡ ಏಕೆ? ಓಂ ಪ್ರಕಾಶ್‌ ರಾಜ್‌ಭರ್‌

09:21 PM Feb 09, 2022 | Team Udayavani |

ಉತ್ತರ ಪ್ರದೇಶ: “ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೈಕ್‌ನಲ್ಲಿ ಮೂವರು ಕುಳಿತು ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತೇವೆ’ ಹೀಗೆಂದು ಸುಹೆಲ್‌ದೇವ್‌ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್‌ ರಾಜ್‌ಭರ್‌ ಹೇಳಿದ್ದಾರೆ.

Advertisement

“ಎಎನ್‌ಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ, ಅವರು “ರೈಲಿನ 70 ಸೀಟುಗಳಲ್ಲಿ 300 ಮಂದಿ ಪ್ರಯಾಣಿಸಲು ಸಾಧ್ಯವಿದೆ ಮತ್ತು ಅವರಿಗೆ ದಂಡ ವಿಧಿಸುವುದಿಲ್ಲ. ಹೀಗಿದ್ದರೆ, ಬೈಕ್‌ನಲ್ಲಿ ಮೂರು ಮಂದಿ ಕುಳಿತು ಪ್ರಯಾಣಿಸುತ್ತಿದ್ದರೆ ಏಕೆ ದಂಡ ವಿಧಿಸಬೇಕು?

ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಬೈಕ್‌ನಲ್ಲಿ ಮೂವರು ಕುಳಿತು ಪ್ರಯಾಣ ಮಾಡಲು ಅನುಮತಿ ನೀಡುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಿಗದ ತುರ್ತು ಆರೋಗ್ಯ ವಾಹನ ; ಉಸಿರಾಟದ ಸಮಸ್ಯೆಯಿಂದ 45 ದಿನದ ಮಗು ಸಾವು

ಒಂದು ವೇಳೆ, ಈ ರೀತಿ ಮಾಡಲು ಅಸಾಧ್ಯವಾದರೆ, ಜೀಪ್‌ಗಳಲ್ಲಿ ಮತ್ತು ರೈಲುಗಳಲ್ಲಿ ಪ್ರಯಾಣಿಸುವವರಿಗೆ ದಂಡ ವಿಧಿಸುತ್ತೇವೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next