Advertisement

‌UP: ವರದಕ್ಷಿಣೆಯಾಗಿ ಸ್ಕಾರ್ಪಿಯೋ ಕಾರು ಕೊಡದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ‌ ಪತಿ

10:52 AM Jan 20, 2024 | Team Udayavani |

ಲಕ್ನೋ: ವರದಕ್ಷಿಣೆ ರೂಪದಲ್ಲಿ ದುಬಾರಿ ಕಾರು ನೀಡದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಆರೋಪದ ಮೇಲೆ ಪತ್ನಿ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಬಂದಾದಲ್ಲಿ ನಡೆದಿದೆ.

Advertisement

ಘಟನೆ ಹಿನ್ನೆಲೆ: 20215 ರಲ್ಲಿ ಮದುವೆಯಾಗಿದ್ದ ಸಂದರ್ಭದಲ್ಲಿ ನನ್ನ ತಂದೆ ವರದಕ್ಷಿಣೆ ರೂಪದಲ್ಲಿ 15 ಲಕ್ಷ ರೂ. ನೀಡಿದ್ದರು. ಆದರೆ ಆ ಬಳಿಕ ಮದುವೆಯ ನಂತರ ತನ್ನ ಪತಿ ಮತ್ತು ಐವರು ಸೋದರ ಮಾವಂದಿರು ಸೇರಿದಂತೆ ಇತರರು ವರದಕ್ಷಿಣೆಗಾಗಿ ಮತ್ತಷ್ಟು ಬೇಡಿಕೆಗಳನ್ನು ಮುಂದಿಡುತ್ತಿದ್ದರು. ಬೇಡಿಕೆ ಈಡೇರದಿದ್ದಾಗ, ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ, ಎರಡನೇ ಮದುವೆಯ ಬೆದರಿಕೆಗಳನ್ನು ಹಾಕಿದ್ದರು. ಕಳೆದ ವರ್ಷ ಜುಲೈನಲ್ಲಿ ತನ್ನನ್ನು ಮನೆಯಿಂದ ಹೊರಹಾಕಲಾಯಿತು ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.

ಸದ್ಯ ಮಹಿಳೆ ತನ್ನ ತವರಿನಲ್ಲಿದ್ದು, ಇತ್ತೀಚೆಗೆ ಪತಿ ಮನೆಗೆ ಬಂದು ವರದಕ್ಷಿಣೆಯಾಗಿ ಸ್ಕಾರ್ಪಿಯೋ ಕಾರನ್ನು ನೀಡುವಂತೆ ಒತ್ತಾಯಿಸಿ ವಾಗ್ವಾದ ನಡೆಸಿದರು. ಅವರ ಬೇಡಿಕೆಯನ್ನು ತಿರಸ್ಕರಿಸಿದ ನಂತರ, ಅವರು ಮೂರು ಬಾರಿ ತಲಾಖ್ ಎಂದು ಹೇಳಿದ್ದಾರೆ.

ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ಘಟನೆಗೆ ಸಂಬಂಧಿಸಿದಂತೆ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಕೋರಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next