Advertisement

World Cup final ಪಂದ್ಯದ ವೇಳೆ ಟಿವಿ ಆಫ್‌ ಮಾಡಿದ್ದಕ್ಕೆ ಮಗನನ್ನೇ ಕೊಂದ ತಂದೆ

05:53 PM Nov 21, 2023 | Team Udayavani |

ಲಕ್ನೋ: ಕ್ಷುಲಕ ಕಾರಣಕ್ಕೆ ಮಗನನ್ನೇ ಕೊಲೆಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

Advertisement

ಭಾನುವಾರ(ನ.19 ರಂದು) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ಮನೆಯಲ್ಲಿ ಗಣೇಶ್ ಪ್ರಸಾದ್ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಮಗ ದೀಪಕ್‌ ನಿಶಾದ್‌ ಅಪ್ಪ ಮೊದಲು ರಾತ್ರಿಯ ಊಟವನ್ನು ತಯಾರಿಸಿ ನಂತರ ಕ್ರಿಕೆಟ್‌ ನೋಡಿಯೆಂದು ಹೇಳಿದ್ದಾನೆ. ಎಷ್ಟು ಹೇಳಿದರೂ ಕೇಳದ್ದಕ್ಕೆ ಮಗ ದೀಪಕ್‌ ಸೀದಾ ಹೋಗಿ ಟಿವಿಯ ಸ್ವಿಚ್‌ ನ್ನು ಆಫ್‌ ಮಾಡಿದ್ದಾನೆ. ಇದರಿಂದ ತಂದೆ – ಮಗನ ನಡುವೆ ವಾಗ್ವಾದ ಶುರುವಾಗಿದೆ. ಇದಾದ ಬಳಿಕ ದೈಹಿಕವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಿಟ್ಟಾದ ತಂದೆ ಗಣೇಶ್‌ ವಿದ್ಯುತ್ ತಂತಿಯಿಂದ ಮಗನ ಕತ್ತು ಹಿಸುಕಿ ಕೊಲೆ ಮಾಡಿ, ಪರಾರಿ ಆಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.

ದೀಪಕ್ ಮತ್ತು ಗಣೇಶ್ ನಡುವೆ ಕುಡಿತದ ಚಟದ ಬಗ್ಗೆ ಆಗಾಗ ವಾಗ್ವಾದಗಳು ನಡೆಯುತ್ತಿದ್ದವು. ಕ್ರಿಕೆಟ್‌ ಪಂದ್ಯದ ವೇಳೆ ನಡೆದ ವಾಗ್ವಾದ ಕೊಲೆಗೆ ಕಾರಣವಾಯಿತೆಂದು ಚಾಕೇರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಬ್ರಿಜ್ ನಾರಾಯಣ್ ಸಿಂಗ್ ಹೇಳಿದ್ದಾರೆ.

ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next