Advertisement

UP; ಜ್ಞಾನವಾಪಿ ಕಾಂಪ್ಲೆಕ್ಸ್ ಬೇಸ್‌ಮೆಂಟ್ ಕೀಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಆದೇಶ

05:27 PM Jan 18, 2024 | Team Udayavani |

ವಾರಾಣಸಿ: ಇಲ್ಲಿನ ವಿವಾದಿತ ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್‌ನಲ್ಲಿರುವ ‘ವ್ಯಾಸ್ ಜಿ ಕಾ ತೆಹ್ಖಾನಾ’ ಎಂದು ಕರೆಯಲ್ಪಡುವ ನೆಲಮಾಳಿಗೆಯ ಕೀಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

Advertisement

ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಬುಧವಾರ ತಮ್ಮ ಆದೇಶದಲ್ಲಿ, ಸಂಕೀರ್ಣದ ದಕ್ಷಿಣ ತುದಿಯಲ್ಲಿರುವ ವ್ಯಾಸ್ ಜಿ ಅವರ ನೆಲಮಾಳಿಗೆಯನ್ನು ಸರಿಯಾಗಿ ನೋಡಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿರುವುದಾಗಿ ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.

“ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್,  ವ್ಯಾಸ್ ಜಿ ಅವರ ನೆಲಮಾಳಿಗೆಯ ರಿಸೀವರ್ ಆಗಿ ನೇಮಕಗೊಂಡಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಅಧಿಕಾರಿಗಳು 1993 ರಲ್ಲಿ ನೆಲಮಾಳಿಗೆಯನ್ನು ತಡೆಹಿಡಿದು ಬೀಗ ಹಾಕಿದ್ದರು ಎಂದು ಯಾದವ್ ಈ ಹಿಂದೆ ಹೇಳಿದ್ದರು. ಅದಕ್ಕೂ ಮೊದಲು, ನೆಲಮಾಳಿಗೆಯನ್ನು ಅರ್ಚಕ ಸೋಮನಾಥ ವ್ಯಾಸ್ ಅವರು ಪೂಜೆಗೆ ಬಳಸುತ್ತಿದ್ದರು ಎಂದು ಯಾದವ್ ತಮ್ಮ ಮನವಿಯಲ್ಲಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next