Advertisement

ಪ್ರಯಾಗ್‌ರಾಜ್‌ ಆದ ಅಲಹಾಬಾದ್‌: ಯುಪಿ ಕ್ಯಾಬಿನೆಟ್‌ ಅನುಮೋದನೆ

03:38 PM Oct 16, 2018 | Team Udayavani |

ಲಕ್ನೋ : ಅಲಹಾಬಾದ್‌ ನಗರವನ್ನು ಪ್ರಸಿದ್ಧ ಯಾತ್ರಾಸ್ಥಳವಾಗಿ ಪ್ರಯಾಗ್‌ರಾಜ್‌ ಎಂದು ಪುನರ್‌ ನಾಮಕರಣ ಮಾಡುವ ಪ್ರಸ್ತಾವಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಇಂದು ಮಂಗಳವಾರ ಅನುಮೋದನೆ ನೀಡಿತು.

Advertisement

ಹಾಗಿದ್ದರೂ ವಿರೋಧ ಪಕ್ಷಗಳು ಸರಕಾರದ ಈ ಕ್ರಮವನ್ನು ವಿರೋಧಿಸಿವೆ ಮತ್ತು ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗುವ ಕುಂಭ ಮೇಳಕ್ಕೆ ಮುನ್ನವೇ ಈ ಪುನರ್‌ ನಾಮಕರಣದ ನಿರ್ಧಾರ ಮಾಡಿರುವುದರಲ್ಲಿ ರಾಜಕೀಯ ಇದೆ ಎಂದು ಆರೋಪಿಸಿವೆ. 

ಪುನರ್‌ ನಾಮಕರಣ ನಿರ್ಧಾರದ ಕ್ಯಾಬಿನೆಟ್‌ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಹಿಸಿದ್ದರು. 

“ಅಲಹಾಬಾದ್‌ ಈಗಿನ್ನು ಪ್ರಯಾಗ್‌ರಾಜ್‌ ಎಂದು ಕರೆಯಲ್ಪಡುವುದಕ್ಕೆ ನಾನು ಸಂತಸಗೊಂಡಿದ್ದೇನೆ’ ಎಂದು ಯುಪಿ ಕ್ಯಾಬಿನೆಟ್‌ ಹಿರಿಯ ಸಚಿವ ಸಿದ್ಧಾರ್ಥ ನಾಥ್‌ ಸಿಂಗ್‌ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next