Advertisement

UP By election;ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವ? DCM ಮೌರ್ಯಗೆ ಸಂಕಷ್ಟ?

12:25 AM Jul 28, 2024 | Team Udayavani |

ಹೊಸದಿಲ್ಲಿ/ಲಕ್ನೋ: ಉತ್ತರಪ್ರದೇಶದ ಬಿಜೆಪಿ ಘಟಕದಲ್ಲಿ ಅಸಮಾಧಾನ ಹೊಗೆಯಾಡುತ್ತಿರುವಂತೆಯೇ, ಸದ್ಯದಲ್ಲೇ ನಡೆಯಲಿರುವ 10 ಕ್ಷೇತ್ರಗಳ ಉಪಚುನಾವಣೆಯ ನೇತೃತ್ವವನ್ನು ಸಿಎಂ ಗೇ ನೀಡಿ ಹೈಕಮಾಂಡ್‌ ಯೋಗಿ ಪರ ಬ್ಯಾಟ್‌ ಬೀಸಿದೆ ಎಂದು ಹೇಳಲಾಗಿದೆ.

Advertisement

ಶುಕ್ರವಾರ ದಿಲ್ಲಿಯಲ್ಲಿ ಸಿಎಂ ಯೋಗಿ, ಬಿಜೆಪಿ ಸಂಘಟನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ರೊಂದಿಗೆ ಚರ್ಚೆ ನಡೆಸಿದ್ದಾರೆ. ಸಭೆಯ ವೇಳೆ ಉತ್ತರ ಪ್ರದೇಶ ಬಿಜೆಪಿ ಘಟಕವನ್ನು ಪುನಾರಚಿ ಸುವ ಬಗ್ಗೆಯೂ ಮಾತುಕತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಲ್ಲಾದ ಹಿನ್ನಡೆ, 2027ರ ವಿಧಾನಸಭೆ ಚುನಾವಣೆ ಸಿದ್ಧತೆ ಬಗ್ಗೆಯೂ ಚರ್ಚೆ ನಡೆದಿದೆ. ಬಿಜೆಪಿ ವರಿಷ್ಠರು ಯೋಗಿ ಮೇಲೆ ಮತ್ತೆ ವಿಶ್ವಾಸ ವ್ಯಕ್ತಪಡಿಸಿದ್ದು, ಅವರ ನಾಯಕತ್ವದಲ್ಲಿಯೇ ಉಪಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ನಡೆಯುವ ಬಗ್ಗೆ ಸುಳಿವು ನೀಡಿದ್ದಾರೆ.

ಮೌರ್ಯಗೆ ಎಚ್ಚರಿಕೆ?: ಇದೇ ವೇಳೆ, ಯೋಗಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿ ಮುಜುಗರ ಉಂಟುಮಾಡಿದ್ದ ಡಿಸಿಎಂ ಕೇಶವ್‌ಪ್ರಸಾದ್‌ ಮೌರ್ಯ ಅವರಿಗೆ ಹೈಕಮಾಂಡ್‌ ಎಚ್ಚರಿಕೆ ನೀಡಿದ್ದು, ಬಹಿರಂಗವಾಗಿ ಏನನ್ನೂ ಮಾತನಾಡದಂತೆ ಸೂಚಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next