Advertisement

ಬಿಜೆಪಿ ಹೋಳಿ ಮಿಲನ್‌ ಕಾರ್ಯಕ್ರಮ ವೇದಿಕೆ ಕುಸಿದು ಹಲವರಿಗೆ ಗಾಯ

09:20 PM Mar 23, 2019 | udayavani editorial |

ಲಕ್ನೋ : ಉತ್ತರ ಪ್ರದೇಶದ ಸಂಭಾಲ್‌ ನಲ್ಲಿ ನಿನ್ನೆ ಶುಕ್ರವಾರ ‘ಹೋಳಿ ಮಿಲನ್‌’ ಗಾಗಿ ಹಾಕಲಾಗಿದ್ದ ವೇದಿಕೆ ಕುಸಿದು ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಗಾಯಗೊಂಡರು.

Advertisement

ಬಿಜೆಪಿ ಕಿಸಾನ್‌ ಮೋರ್ಚಾ ನಾಯಕ ಅವಧೇಶ್‌ ಯಾದವ್‌ ಅವರು ಪ್ರಮುಖ ಗಾಯಾಳುಗಳಲ್ಲಿ ಒಬ್ಬರಾಗಿದ್ದಾರೆ. 

ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅನೇಕ ಜನರು ವೇದಿಕೆ ಏರಿ ಬಂದದ್ದೇ ಅದು ಕುಸಿಯಲು ಕಾರಣವಾಯಿತು. ವೇದಿಕೆ ಕುಸಿತದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ವೇದಿಕೆ ಕುಸಿದ ಸಂದರ್ಭದಲ್ಲಿ ಬಿಜೆಪಿ ನಾಯಕರೊಬ್ಬರು ಭಾಷಣ ಮಾಡುತ್ತಿದ್ದುದು ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬಂದಿದೆ. 

ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರಿಗೆ ಆಗಿರುವ ಗಾಯಗಳ ಸ್ವರೂಪ ಗೊತ್ತಾಗಿಲ್ಲ. 

Advertisement

ಈ ಹಿಂದೆಯೂ ಇದೇ ರೀತಿ ಹಲವು ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆ ಕುಸಿದಿರುವ ನಿದರ್ಶನಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next