Advertisement

ಮ.ಪ್ರ.ದ ಉದ್ಯೋಗಗಳು ಯುಪಿ, ಬಿಹಾರಿಗಳ ಪಾಲಿಗೆ: ಕಮಲ್‌ ನಾಥ್‌

07:08 PM Dec 17, 2018 | udayavani editorial |

ಭೋಪಾಲ್‌ : ಉದ್ಯೋಗವನ್ನು ಅರಸಿಕೊಂಡು ಬಿಹಾರ ಮತ್ತು ಉತ್ತರ ಪ್ರದೇಶದ ಜನರು ಮಧ್ಯಪ್ರದೇಶಕ್ಕೆ ಬಂದು ಇಲ್ಲಿನ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುತ್ತಾರೆ; ಹಾಗಾಗಿ ಮಧ್ಯ ಪ್ರದೇಶದವರಿಗೆ ರಾಜ್ಯದಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂದು ನೂತನ ಸಿಎಂ ಕಮಲ್‌ ನಾಥ್‌ ಹೇಳಿದ್ದಾರೆ.

Advertisement

ಮಧ್ಯ ಪ್ರದೇಶದ ಶೇ.70 ಮಂದಿ ಜನರಿಗೆ ಉದ್ಯೋಗ ದೊರಕುವ ತನಕ ಹೂಡಿಕೆಗೆ ಪ್ರೋತ್ಸಾಹನ ನೀಡುವ ಯಾವುದೇ ಸ್ಕೀಮುಗಳನ್ನು ಜನರ ಮೇಲೆ ಹೇರುವುದಿಲ್ಲ ಎಂದು ಕಮಲ್‌ ನಾಥ್‌ ಹೇಳಿದರು. 

ಮುಖ್ಯಮಂತ್ರಿಯಾಗಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ರಾಜ್ಯದ ರೈತರ 2 ಲಕ್ಷ ವರೆಗಿನ ಕೃಷಿ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಇಂದೇ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next