Advertisement

ಉ.ಪ್ರ. ಸಿಎಂ ಯೋಗಿಯನ್ನು ಹಾಡಿ ಹೊಗಳಿದ ಅಮಿತ್‌ ಶಾ

07:39 PM Aug 05, 2019 | sudhir |

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 2017ರಲ್ಲಿ ನೇಮಕವಾದಾಗ ಯೋಗಿ ಆದಿತ್ಯನಾಥ್‌ ಅವರಿಗೆ ಯಾವುದೇ ಆಡಳಿತದ ಅನುಭವವಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ದಕ್ಷ ಆಡಳಿತ ನೀಡುವ ಮೂಲಕ ಅವರು ಬಿಜೆಪಿಯ ಆಯ್ಕೆಗೆ ಸೂಕ್ತ ಸಮರ್ಥನೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶ್ಲಾ ಸಿದ್ದಾರೆ.

Advertisement

ಲಕ್ನೋದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, “”ಮುಖ್ಯಮಂತ್ರಿಯಾಗುವ ಮುನ್ನ ಯೋಗಿ ಒಂದು ಸ್ಥಳೀಯ ಸರಕಾರವನ್ನೂ ನಡೆಸಿದವರಲ್ಲ. ಹಾಗಾಗಿಯೇ, ಅವರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸಿದಾಗ ಹಲವಾರು ಮಂದಿ ನನಗೆ ಫೋನ್‌ ಮಾಡಿ ನಿಮ್ಮ ಆಯ್ಕೆ ಸರಿಯಲ್ಲ ಎಂದರು. ಆದರೆ, ಯೋಗಿಯವರು ನಮ್ಮ ಆಯ್ಕೆಯನ್ನು ಹುಸಿಗೊಳಿಸಲಿಲ್ಲ. ತಮ್ಮ ಸಮರ್ಪಣಾ ಭಾವದಿಂದ, ಕಠಿಣ ಪರಿಶ್ರಮದ ದುಡಿಯುವ ಮೂಲಕ ಅವರು, ರಾಜ್ಯವನ್ನು ಅಭಿವೃದ್ಧಿಯತ್ತ ಯಶಸ್ವಿಯಾಗಿ ಕೊಂಡೊಯ್ಯುತ್ತಿದ್ದಾರೆ.

ಭಾರತದ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಗುರಿಗೆ ಉತ್ತರ ಪ್ರದೇಶ ಗಣನೀಯ ಕಾಣಿಕೆ ನೀಡುತ್ತದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next