Advertisement

ಶಾಲೆಯ ಶುಲ್ಕ ಕಟ್ಟಿಲ್ಲವೆಂದು 35 ವಿದ್ಯಾರ್ಥಿಗಳನ್ನೇ ಒತ್ತೆ ಇರಿಸಿದ ಶಾಲಾ ಆಡಳಿತ ಮಂಡಳಿ

07:35 PM May 08, 2022 | Team Udayavani |

ಲಕ್ನೋ: ಶಾಲೆಯ ಶುಲ್ಕವನ್ನು ಪೋಷಕರು ಕಟ್ಟಿಲ್ಲ ಎನ್ನುವ ಕಾರಣಕ್ಕೆ ಶಾಲೆಯ ಆಡಳಿತವು 35 ವಿದ್ಯಾರ್ಥಿಗಳನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಘಟನೆ ಉತ್ತರಪ್ರದೇಶದ ಬರೇಲಿಯ ಹಾರ್ಟ್‌ಮನ್‌ ಶಾಲೆಯಲ್ಲಿ ನಡೆದಿದೆ.

Advertisement

ಶನಿವಾರ ಸಂಜೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲೆಂದು ಪೋಷಕರು ಬಂದಾಗ, ಮಕ್ಕಳನ್ನೆಲ್ಲ ಕೋಣೆಯೊಳಗೆ ಕೂಡಿ ಹಾಕಿಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ:ಪಿಎಸ್‌ಐ ಹಗರಣದ ಪಿತಾಮಹ ಮುಖ್ಯಮಂತ್ರಿ ಬೊಮ್ಮಾಯಿ : ಡಿಕೆಶಿ ಗಂಭೀರ ಆರೋಪ   

ನಂತರ ಪೊಲೀಸರ ಸಹಾಯ ಪಡೆದು, ಮಕ್ಕಳನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಶಾಲಾ ಆಡಳಿತದ ವಿರುದ್ಧ ದೂರು ನೀಡಲು ಪೋಷಕರ ಸಂಘ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next