Advertisement

ಲಾಕ್‌ಡೌನ್‌ ಮುಗಿಯುವವರೆಗೂ ತರಕಾರಿ ವಿತರಿಸುವೆ: ಶಿವರುದ್ರಮ್ಮ

06:06 PM Apr 24, 2020 | Suhan S |

ಮಾಗಡಿ: ಕೋವಿಡ್‌-19 ತಡೆಗೆ ಲಾಕ್‌ ಡೌನ್‌ ಜಾರಿಯಲ್ಲಿದ್ದು, ವಾರ್ಡ್‌ನ ಜನತೆಗೆ ಲಾಕ್‌ಡೌನ್‌ ಮುಗಿಯುವವರೆಗೆ ತರಕಾರಿ ವಿತರಿಸುತ್ತೇನೆ ಎಂದು ಪುರಸಭಾ ಸದಸ್ಯೆ ಶಿವರುದ್ರಮ್ಮ ವಿಜಯ ಕುಮಾರ್‌ ಭರವಸೆ ನೀಡಿದರು.

Advertisement

ಪಟ್ಟಣದ 21ನೇ ವಾರ್ಡ್‌ನ ಬಹುತೇಕ ಮಂದಿ ಒಂದಲ್ಲ ಒಂದು ಅಂಗಡಿಗಳಲ್ಲಿ ವ್ಯಾಪಾರ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿ ದ್ದರು. ಈಗ ಲಾಕ್‌ಡೌನ್‌ ನಿಂದ ಸಂಕಷ್ಟ ಕ್ಕೊಳಗಾಗಿದ್ದಾರೆ. ಜೀವನ ಕಷ್ಟಕರವಾಗಿದೆ. ಪಡಿತರ ಇದ್ದರೆ ಸಾಲದು, ಅಗತ್ಯ ದಿನಸಿ ಪದಾರ್ಥ, ಹಾಲು,ತರಕಾರಿ ನಿತ್ಯ ಬೇಕಿರುತ್ತದೆ. ನಾನು ಮಾಜಿ ಶಾಸಕ ಎಚ್‌ .ಸಿ.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌, ತಾಲೂಕು ಅಧ್ಯಕ್ಷ ರಂಗ ಧಾಮಯ್ಯ, ಬಿಬಿಎಂಪಿ ಸದಸ್ಯ ವರದ ರಾಜು ಅವರ ಸಹಕಾರದಿಂದ ವಾರ್ಡ್‌ನ ಜನತೆಗೆ ನೆರವಾಗಿದ್ದೇನೆ ಎಂದು ಹೇಳಿದರು.

ಯುವ ಮುಖಂಡ ವಿಜಯ ಕುಮಾರ್‌, ಪುರಸಭಾ ಮಾಜಿ ಸದಸ್ಯ ರವಿಶಂಕರ್‌, ಪ್ರದೀಪ್‌, ವಿನಯ್‌, ನಾಗೇಶ್‌, ವಾರ್ಡ್‌ ನಾಗರಿಕರು, ಮಹಿಳೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next