Advertisement

ಪರಿಹಾರವಾಗದ ಆಧಾರ್‌ ಬವಣೆ

08:54 AM Jun 14, 2019 | Team Udayavani |

ದೇವನಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್‌ಗಾಗಿ ಸಾರ್ವಜನಿಕರು ನಿತ್ಯವೂ ಪರಿತಪ್ಪಿಸುವಂತಾಗಿದೆ. ಸಮರ್ಪಕ ವಾಗಿ ಕಾರ್ಯ ನಿರ್ವಹಿಸದ ಸರ್ವರ್‌, 35ಕ್ಕೆ ಮಿತಿ ಗೊಳಿಸಿರುವ ನೋಂದಣಿ ಸೇರಿ ಹಲವು ಸಮಸ್ಯೆಗ ಳಿಂದ ಹೊಸ ಆಧಾರ್‌ ಪಡೆಯುವವರು ಪರದಾಡುವಂತಾಗಿದೆ.

Advertisement

ನಿತ್ಯವೂ ಗ್ರಾಮೀಣ ಪ್ರದೇಶದಿಂದ ನೂರಾರು ಜನರು ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಸಮೀ ಪದ ಜಿಲ್ಲಾ ಸಂಕೀರ್ಣ ಆಧಾರ್‌ ಕಾರ್ಡ್‌ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರ ಪರದಾಟ: ಹೊಸ ಹಾಗೂ ತಿದ್ದು ಪಡಿ ಆಧಾರ್‌ ಕಾರ್ಡ್‌ ವಿತರಣೆ ಜವಾಬ್ದಾರಿಯನ್ನು ಸ್ಪಂದನ ಕೇಂದ್ರ ನಿರ್ವಹಿಸುತ್ತಿದೆ. ಗ್ರಾಪಂ, ಬ್ಯಾಂಕ್‌, ನಾಡ ಕಚೇರಿಗಳಲ್ಲೂ ಆಧಾರ್‌ ಮಾಡಿಸಬಹುದು. ಆದರೆ ಸರ್ವರ್‌ ಸಮಸ್ಯೆ ಹಾಗೂ ನೋಂದಣಿ ಮಿತಿ ಯಿಂದಾಗಿ ಸಾರ್ವಜನಿಕರು ಪರಿತಪ್ಪಿಸುವಂತಾಗಿದೆ. ಆಧಾರನ್ನು ಸುಪ್ರೀಂ ಮಾನ್ಯ ಮಾಡದಿದ್ದರೂ ಸಾರ್ವ ಜನಿಕ ಕಚೇರಿಗಳಲ್ಲಿ ಆಧಾರ್‌ ಕಾರ್ಡ್‌ನ ಅಗತ್ಯವಿದೆ ಎಂದು ಕೇಳುವುದರಿಂದ ಅಗತ್ಯವೆನಿಸಿದೆ.

ಸರ್ವರ್‌ ಸಮಸ್ಯೆ ನೆಪ: ಆಧಾರ್‌ ವಿತರಣೆ ಕೇಂದ್ರ ಗಳು ಆರಂಭವಾದರೂ ಸರ್ವರ್‌ ಸಮಸ್ಯೆಯ ನೆಪ ಹೇಳುವ ಅಧಿಕಾರಿಗಳು, ಸಾರ್ವಜನಿಕರು ಪಟ್ಟಣ ಗಳಿಗೆ ಅಲೆದಾಡುವಂತೆ ಮಾಡುತ್ತಾರೆ. ಇದರಿಂದಾಗಿ ಹಳ್ಳಿಗಾಡಿನ ಪ್ರದೇಶಗಳ ಜನರು ತೊಂದರೆ ಅನುಭವಿ ಸುತ್ತಿದ್ದಾರೆ. ಚಿಕ್ಕ ಮಕ್ಕಳಿಗೂ ಆಧಾರ್‌ ಅಗತ್ಯವಿರುವು ದರಿಂದ ಪಾಲಕರು ಚಿಕ್ಕಮಕ್ಕಳನ್ನು ಜತೆಗೆ ಕರೆದು ಕೊಂಡು ಬಂದು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಬೆಳಗಿನ ಜಾವ 5-6 ಗಂಟೆಯಿಂದಲೇ ಕಾಯುವ ಪರಿಸ್ಥಿತಿ ಇದೆ.

ಆಧಾರ್‌ ನೋಂದಣಿ ಮಾಡಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗಿದೆ. ದಿನವಿಡೀ ಕಾದರೂ ಆಧಾರ್‌ ನೋಂದಣಿಯಾಗುತ್ತಿಲ್ಲ. ಹೀಗಾಗಿ ಚಾಪೆ ತಂದು ಇಲ್ಲೆ ಮಲಗುವಂತಹ ಪರಿಸ್ಥಿತಿಯಿದೆ ಎಂದು ಆಧಾರ್‌ ನೋಂದಣಿಗೆ ಬಂದವರೊಬ್ಬರು ಸರ್ಕಾರದ ವಿರುದ್ಧ ಅಸಮಾಧಾನ ತೋಡಿಕೊಂಡರು.

Advertisement

ಸಾರ್ವಜನಿಕರ ಆಕ್ರೋಶ: ಹಳ್ಳಿಗಾಡಿನ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಗ್ರಾಪಂ ನಾಡ ಕಚೇರಿ, ಅಂಚೆ ಕಚೇರಿಗಳಲ್ಲೇ ಆಧಾರ್‌ ಕೇಂದ್ರಗಳನ್ನು ತೆರೆಯಬೇಕೆಂಬ ಆದೇಶ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರಿ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಸಹ ನೀಡುತ್ತಿಲ್ಲ. ಇದರಿಂದ ಈವರೆಗೂ ಆಧಾರ್‌ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.

ದಿನಕ್ಕೆ 35 ಟೋಕನ್‌ ಮಾತ್ರ: ದಿನವೂ ಸೂರ್ಯ ಉದಯಿಸುವ ಮುನ್ನವೇ ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ಟೋಕನ್‌ಗಳನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲು ಕಾಯುತ್ತಿದ್ದಾರೆ. ಬೆಳಿಗ್ಗೆ 10.30ಕ್ಕೆ ಬಾಗಿಲು ತೆರೆಯುವುದನ್ನೇ ಕಾದು ಟೋಕನ್‌ ಪಡೆಯುತ್ತಾರೆ. ದಿನವೊಂದಕ್ಕೆ ಕೇವಲ 35 ಜನರಿಗೆ ಮಾತ್ರ ವಿತರಣೆ ಆಗುತ್ತಿದೆ. ಹೊಸದಾಗಿ ಆಧಾರ್‌ ಹಾಗೂ ತಿದ್ದು ಪಡಿ ಮಾಡಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಚಿಕ್ಕ ವåಕ್ಕಳಿಗೂ ಆಧಾರ್‌ ಮಾಡಿಸುವ ಉದ್ದೇಶದಿಂದ ಮಕ್ಕಳೊಂದಿಗೆ ಪೋಷಕರು ಬರುತ್ತಿದ್ದಾರೆ. ತಿಂಡಿಗೂ ಹೋಗಲು ಸಾಧ್ಯವಾಗದೇ, ಅಲ್ಲೆ ತರಿಸಿಕೊಂಡು ತಿಂಡಿ ಸೇವಿಸುವಂತಹ ಪರಿಸ್ಥಿತಿ ಎದುರಾಗಿದೆ.

ಆಧಾರ್‌ಗಾಗಿ ನಿತ್ಯವೂ ಅಲೆದಾಡುವಂತಾಗಿದೆ. ಅಲ್ಲದೆ ಆಧಾರ್‌ ನೋಂದಣಿ ದಿನಕ್ಕೆ ಕೇವಲ 35ಕ್ಕೆ ಮಿತಿಗೊಳಿಸಲಾಗಿದೆ. ಬೆಳಗ್ಗೆಯೇ ಬಂದು ಕಾಯುತ್ತಿದ್ದರೂ ನೋಂದಣಿಯಾಗುತ್ತಿಲ್ಲ. ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಹೀಗಾಗ ಸರ್ಕಾರ ಇನ್ನಾದರೂ ಆಧಾರ್‌ ಸಮಸ್ಯೆಯನ್ನು ಪರಿಹರಿಸಬೇಕು ಎಂದು ದೊಡ್ಡಬಳ್ಳಾಪುರದ ನಿವಾಸಿ ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದರು.

● ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next